Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-11

ಹೊನ್ನಾವರದಲ್ಲಿ ಬೈಕ್ ಅಪಘಾತ: ಸುರೇಶ್ ಭಂಡಾರಿ ಸಾವು

News Details

ಹೊನ್ನಾವರದ ತೊಳಸಾಣಿ-ಚಿಕ್ಕೋಣಿ ರಸ್ತೆಯಲ್ಲಿ ವೇಗವಾಗಿ ಚಲಿಸಿದ ಬೈಕು ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಸುರೇಶ ಭಂಡಾರಿ ಎಂಬಾತರು ಅಲ್ಲಿಯೇ ಸಾವನಪ್ಪಿದ್ದಾರೆ.

ಕುಮಟಾದ ಬಾಡದಲ್ಲಿ ಸುರೇಶ ಭಂಡಾರಿ (73) ವಾಸವಾಗಿದ್ದರು. ಬ್ಯಾಂಕ್ ನೌಕರರಾಗಿದ್ದ ಅವರು ನಿವೃತ್ತಿ ನಂತರ ಮನೆಯಲ್ಲಿದ್ದರು. ಏಪ್ರಿಲ್ 10ರಂದು ಕುಮಟಾ ಹೊಲನಗದ್ದೆಯ ರಾಘವೇಂದ್ರ ನಾಯ್ಕ (19) ಅವರ ಜೊತೆ ಸುರೇಶ ಭಂಡಾರಿ ಅವರು ಬೈಕ್ ಸಂಚಾರ ನಡೆಸಿದ್ದರು.

ರಾಘವೇಂದ್ರ ನಾಯ್ಕರನ್ನು ಹಿಂದೆ ಕೂರಿಸಿಕೊಂಡ ಸುರೇಶ ಭಂಡಾರಿ ಅವರು ಜೋರಾಗಿ ಬೈಕ್ ಓಡಿಸುತ್ತಿದ್ದರು. ಹೊನ್ನಾವರದ ಚಿಕ್ಕೊಳ್ಳಿಯ ಬಂಗಾರಗುAಡಿ ರಸ್ತೆ ಕಡೆ ಅವರು ಚಲಿಸಿದರು. ರಸ್ತೆ ಇಳಿಜಾರು ಹಾಗೂ ತಿರುವನ್ನು ಲೆಕ್ಕಿಸದೇ ಜೋರಾಗಿ ಬೈಕು ಓಡಿಸಿದರು. ರಸ್ತೆ ಅಂಚಿನಲ್ಲಿದ್ದ ಮರಕ್ಕೆ ಬೈಕ್ ಗುದ್ದಿದರು.

ಬೈಕ್ ಮರಕ್ಕೆ ಗುದ್ದಿದ ರಭಸಕ್ಕೆ ಸುರೇಶ ಭಂಡಾರಿ ಅವರ ಕಣ್ಣು, ಕಾಲಿಗೆ ಗಂಭೀರ ಪ್ರಮಾಣದಲ್ಲಿ ಗಾಯವಾಯಿತು. ಚೇತರಿಸಿಕೊಳ್ಳುವುದರೊಳಗೆ ಅವರು ಅಲ್ಲಿಯೇ ಕೊನೆ ಉಸಿರೆಳೆದರು. ಬೈಕ್ ಹಿಂದೆ ಕೂತಿದ್ದ ರಾಘವೇಂದ್ರ ನಾಯ್ಕ ಅವರು ಈ ಅಪಘಾತದಿಂದ ಗಾಯಗೊಂಡರು. ಮೊಣಕಾಲು ಹಾಗೂ ಹೊಟ್ಟೆಗೆ ಗಾಯ ಮಾಡಿಕೊಂಡ ರಾಘವೇಂದ್ರ ನಾಯ್ಕ ಅವರು ಹೊನ್ನಾವರ ಪೊಲೀಸ್ ಠಾಣೆಗೆ ತೆರಳಿ ಅಪಘಾತದ ಬಗ್ಗೆ ವಿವರಿಸಿ, ದೂರು ದಾಖಲಿಸಿದರು.