
0:00:00
2025-04-14
ಮೈಸೂರಿನಿಂದ ಬಂದ ಪ್ರವಾಸಿ ಬಸ್ಸು ಹೊನ್ನಾವರ ಗೇರುಸೊಪ್ಪದ ಬಳಿ ಪಲ್ಟಿ
News Details
ಮೈಸೂರಿನಿಂದ ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ ಬಸ್ಸು ಹೊನ್ನಾವರದ ಗೇರುಸೊಪ್ಪದ ಬಳಿ ಪಲ್ಟಿಯಾಗಿದೆ.
ಶನಿವಾರ ರಾತ್ರಿ ನಡೆದ ಈ ಅಪಘಾತದಲ್ಲಿ 15ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಸುಳೆಮುರ್ಖಿ ತಿರುವಿನಲ್ಲಿ ಬಸ್ಸು ಹೆದ್ದಾರಿ ಪಕ್ಕ ಉರುಳಿ ಬಿದ್ದಿದೆ. 51 ಪ್ರವಾಸಿಗರು ಈ ಬಸ್ಸಿನಲ್ಲಿದ್ದರು. ಗಾಯಗೊಂಡವರನ್ನು ಹೊನ್ನಾವರ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯದ ಮಾಹಿತಿ ಪ್ರಕಾರ ಗಾಯಗೊಂಡವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಂಭೀರ ಗಾಯಗೊಂಡವರನ್ನು ಬೇರೆ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಈ ಬಸ್ಸಿನಲ್ಲಿದ್ದವರು ಮೈಸೂರು ಪ್ರವಾಸಕ್ಕೆ ಹೋಗಿದ್ದರು. ಎಲ್ಲರೂ ಮಹಾರಾಷ್ಟ್ರ ಮೂಲದವರಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.