Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-14

ಗೋಕರ್ಣ ಕಡಲತೀರದಲ್ಲಿ ವಿದ್ಯಾರ್ಥಿಗೆ ಅಪಾಯ, ಜೀವರಕ್ಷಕರಿಂದ ರಕ್ಷಣೆ

News Details

ಗೋಕರ್ಣ ಕಡಲತೀರದಲ್ಲಿ ಮೋಜು-ಮಸ್ತಿಯಲ್ಲಿ ತೊಡಗಿದ್ದ ವಿದ್ಯಾರ್ಥಿಯೊಬ್ಬ ಅಪಾಯಕ್ಕೆ ಸಿಲುಕಿದ್ದು, ಜೀವರಕ್ಷಕ ಸಿಬ್ಬಂದಿ ಲೋಕೇಶ್ ಹರಿಕಾಂತ ಅವರ ಜೀವ ಉಳಿಸಿದ್ದಾರೆ. ಗಣೇಶ ಅಂಬಿಗ, ಶಿವಪ್ರಸಾದ್ ಅಂಬಿಗ ಸಹ ಸಾಹಸದಿಂದ ವಿದ್ಯಾರ್ಥಿಯನ್ನು ದಡಕ್ಕೆ ಎಳೆದು ತಂದಿದ್ದಾರೆ.

ಬೆoಗಳೂರಿನಿoದ 50 ವಿದ್ಯಾರ್ಥಿಗಳು ಭಾನುವಾರ ಗೋಕರ್ಣಕ್ಕೆ ಬಂದಿದ್ದರು. ಅದರಲ್ಲಿ ಜನಾರ್ಧನ (24) ಎಂಬಾತರು ಸಮುದ್ರಕ್ಕೆ ಹಾರಿದ್ದು, ಅಪಾಯಕ್ಕೆ ಸಿಲುಕಿದರು. ಮುಂದೆ ಹೋಗದಂತೆ ಸೂಚಿಸಿದರೂ ಅವರು ಕೇಳಲಿಲ್ಲ. ಸಾಕಷ್ಟು ಸಮಯದ ನಂತರ ಜನಾರ್ಧನ್ ಅವರು ನೀರಿನ ಸೆಳತಕ್ಕೆ ಸಿಲುಕಿರುವುದನ್ನು ನೋಡಿದ ಜೀವ ರಕ್ಷಕ ಸಿಬ್ಬಂದಿ ಸಮುದ್ರಕ್ಕೆ ಹಾರಿ ಅವರ ಜೀವ ಕಾಪಾಡಿದರು. ಸ್ಥಳೀಯರಾದ ಅಶ್ವನಿ ಕುಮಾರ್ ಅವರು ಜೀವ ರಕ್ಷಕ ಸಿಬ್ಬಂದಿಗೆ ನೆರವಾದರು.