
0:00:00
2025-04-14
ಗೋಕರ್ಣ ಕಡಲತೀರದಲ್ಲಿ ವಿದ್ಯಾರ್ಥಿಗೆ ಅಪಾಯ, ಜೀವರಕ್ಷಕರಿಂದ ರಕ್ಷಣೆ
News Details
ಗೋಕರ್ಣ ಕಡಲತೀರದಲ್ಲಿ ಮೋಜು-ಮಸ್ತಿಯಲ್ಲಿ ತೊಡಗಿದ್ದ ವಿದ್ಯಾರ್ಥಿಯೊಬ್ಬ ಅಪಾಯಕ್ಕೆ ಸಿಲುಕಿದ್ದು, ಜೀವರಕ್ಷಕ ಸಿಬ್ಬಂದಿ ಲೋಕೇಶ್ ಹರಿಕಾಂತ ಅವರ ಜೀವ ಉಳಿಸಿದ್ದಾರೆ. ಗಣೇಶ ಅಂಬಿಗ, ಶಿವಪ್ರಸಾದ್ ಅಂಬಿಗ ಸಹ ಸಾಹಸದಿಂದ ವಿದ್ಯಾರ್ಥಿಯನ್ನು ದಡಕ್ಕೆ ಎಳೆದು ತಂದಿದ್ದಾರೆ.
ಬೆoಗಳೂರಿನಿoದ 50 ವಿದ್ಯಾರ್ಥಿಗಳು ಭಾನುವಾರ ಗೋಕರ್ಣಕ್ಕೆ ಬಂದಿದ್ದರು. ಅದರಲ್ಲಿ ಜನಾರ್ಧನ (24) ಎಂಬಾತರು ಸಮುದ್ರಕ್ಕೆ ಹಾರಿದ್ದು, ಅಪಾಯಕ್ಕೆ ಸಿಲುಕಿದರು. ಮುಂದೆ ಹೋಗದಂತೆ ಸೂಚಿಸಿದರೂ ಅವರು ಕೇಳಲಿಲ್ಲ. ಸಾಕಷ್ಟು ಸಮಯದ ನಂತರ ಜನಾರ್ಧನ್ ಅವರು ನೀರಿನ ಸೆಳತಕ್ಕೆ ಸಿಲುಕಿರುವುದನ್ನು ನೋಡಿದ ಜೀವ ರಕ್ಷಕ ಸಿಬ್ಬಂದಿ ಸಮುದ್ರಕ್ಕೆ ಹಾರಿ ಅವರ ಜೀವ ಕಾಪಾಡಿದರು. ಸ್ಥಳೀಯರಾದ ಅಶ್ವನಿ ಕುಮಾರ್ ಅವರು ಜೀವ ರಕ್ಷಕ ಸಿಬ್ಬಂದಿಗೆ ನೆರವಾದರು.