Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-15

ಮಾವಿನ ಮರದಿಂದ ಬಿದ್ದು ಬಸವರಾಜ ವಡ್ಡರ್ ಸಾವನ್ನಪ್ಪಿದ ದುರ್ಘಟನೆ

News Details

ಕಾರವಾರದ ಶಿರವಾಡದಲ್ಲಿ ವಾಸವಾಗಿದ್ದ ಬಸವರಾಜ ವಡ್ಡರ್ (50) ಮಾವಿನ ಮರದಿಂದ ಬಿದ್ದು ಸಾವನಪ್ಪಿದ್ದಾರೆ.

ಹಳಿಯಾಳದ ಬಸವರಾಜ ವಡ್ಡರ್ ಕಾರವಾರದಲ್ಲಿ ವಾಸವಾಗಿದ್ದರು. ಗೌಂಡಿ ಕೆಲಸ ಮಾಡಿಕೊಂಡಿದ್ದ ಅವರು ಶಿರವಾಡದಲ್ಲಿ ಅವರು ಮನೆ ಮಾಡಿಕೊಂಡಿದ್ದರು. ಮನೆ ಹಿಂದೆ ಮಾವಿನ ಮರವಿತ್ತು. ಏಪ್ರಿಲ್ 13ರಂದು ಸರಾಯಿ ಕುಡಿದ ಅವರು ಮಾವಿನ ಮರ ಏರುವ ಪ್ರಯತ್ನ ಮಾಡಿದರು. 20 ಅಡಿ ಎತ್ತರದವರೆಗೂ ಏರಿ ಮಾವಿನ ಕಾಯಿ ಕೊಯ್ದರು.

ಆ ವೇಳೆ ಆಕಸ್ಮಿಕವಾಗಿ ಅವರ ಕಾಲು ಜಾರಿತು. ನೆಲಕ್ಕೆ ಬಿದ್ದ ಬಸವರಾಜ ವಡ್ಡರ್ ಅವರ ತಲೆ ಹಿಂದೆ ಭಾರೀ ಪ್ರಮಾಣದಲ್ಲಿ ಪೆಟ್ಟಾಯಿತು. ರಕ್ತ ಸುರಿಯುತ್ತಿರುವುದನ್ನು ನೋಡಿದ ಕುಟುಂಬದವರು ಸರ್ಕಾರಿ ಆಸ್ಪತ್ರೆಗೆ ಕರೆತಂದರು. ಆದರೆ, ಬಸವರಾಜ ವಡ್ಡರ್ ಅಷ್ಟರೊಳಗೆ ಕೊನೆ ಉಸಿರೆಳೆದಿದ್ದರು. ಹಳಿಯಾಳದ ಸಿದ್ದರಾಮೇಶ್ವರಗಲ್ಲಿಯಲ್ಲಿದ್ದ ಅವರ ಪುತ್ರ ಶ್ರೀಕಾಂತ ವಡ್ಡರ್ ಕಾರವಾರಕ್ಕೆ ಆಗಮಿಸಿ, ಪೊಲೀಸ್ ದೂರು ನೀಡಿದರು. ಅದಾದ ನಂತರ ಶವ ಪಡೆದರು.