
0:00:00
2025-04-15
ಸೀತಾರಾಮ ಭಾಗ್ವತ್ ಅವರ ಕಾರು ಅಪಘಾತಕ್ಕೆ ಶಿಕಾರಾದರೂ ಎಲ್ಲರೂ ಸುರಕ್ಷಿತ
News Details
ಕುಮಟಾದ ವ್ಯಾಪಾರಿ ಸೀತಾರಾಮ ಭಾಗ್ವತ್ ಅವರ ಕಾರು ಹೊನ್ನಾವರದಲ್ಲಿ ಅಪಘಾತವಾಗಿದೆ. ಕಾರಿನಲ್ಲಿದ್ದವರಿಗೆ ಯಾವುದೇ ಗಾಯವಾಗಿಲ್ಲ.
ಕುಮಟಾ ಬಂದರು ರಸ್ತೆಯ ಸೀತಾರಾಮ ಭಾಗ್ವತ್ ಅವರು ಏಪ್ರಿಲ್ 13ರ ರಾತ್ರಿ ಹೊನ್ನಾವರಕ್ಕೆ ಬಂದಿದ್ದರು. ಇಲ್ಲಿನ ಶ್ರೀಕುಮಾರ ಪೆಟ್ರೋಲ್ ಬಂಕ್ ಎದುರು ಅವರು ಕಾರು ತಿರುಗಿಸುವ ಪ್ರಯತ್ನ ಮಾಡಿದರು. ಕಾರಿನ ಇಂಡಿಕೇಟರ್ ಹಾಕಿ ಬಲಕ್ಕೆ ತಿರುಗಿಸುವಾಗ ಹಿಂದಿನಿAದ ಬಂದ ಬುಲೇರೋ ಗುಡ್ಸ್ ಕಾರಿಗೆ ಗುದ್ದಿತು. ಗುದ್ದಿದ ಬುಲೆರೋ ಚಾಲಕ `ತನಗೂ ಇದಕ್ಕೂ ಸಂಬAಧವೇ ಇಲ್ಲ' ಎಂಬAತೆ ವರ್ತಿಸಿದರು. ಕಾರಿನ ಒಳಗಿದ್ದವರಿಗೆ ಏನಾಯಿತು? ಎಂದು ಸಹ ಆತ ಗಮನಿಸಲಿಲ್ಲ. ಬುಲೆರೋ ಸಹ ನಿಲ್ಲಿಸದೇ ಅಲ್ಲಿಂದ ಪರಾರಿಯಾದರು. ಕಾರು ಜಖಂ ಆದ ಕಾರಣ ಸೀತಾರಾಮ ಭಾಗ್ವತ್ ಅವರು ಸಿಟ್ಟಾದರು. ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಅಪರಿಚಿತ ಬುಲೆರೋ ಚಾಲಕನ ವಿರುದ್ಧ ದೂರು ನೀಡಿದರು.