Loading...
  • aksharakrantinagarajnaik@gmail.com
  • +91 8073197439
Total Visitors: 2788
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-17

ಯಲ್ಲಾಪುರ: ವಲಿಷಾಗಲ್ಲಿಯಲ್ಲಿ ನಾಗರ ಹಾವು ಆತಂಕ, ಉರಗತಜ್ಞ ಅಕ್ಬರ್ ಸೆರೆಹಿಡಿದರು

News Details

ಯಲ್ಲಾಪುರದ ವಲಿಷಾಗಲ್ಲಿಯಲ್ಲಿ ನಾಗರ ಹಾವು ಕಾಣಿಸಿಕೊಂಡು, ಅಲ್ಲಿದ್ದವರ ಆತಂಕ ಹೆಚ್ಚಿಸಿತು. ನಂತರ ಆ ನಾಗರ ಹಾವನ್ನು ಉರಗತಜ್ಞ ಅಕ್ಬರ್ ಸೆರೆ ಹಿಡಿದರು.

ಇಲಿಯನ್ನು ಬೆನ್ನಟ್ಟಿ ಬಂದ ನಾಗರ ಹಾವು ರಫೀಕ್ ಅವರ ಮನೆಯೊಳಗೆ ನುಸುಳಿ ಅಲ್ಲಿದ್ದವರ ಆತಂಕಕ್ಕೆ ಕಾರಣವಾಯಿತು. ರಫೀಕ್ ಕುಟುಂಬದವರು ಮನೆಯೊಳಗೆ ಹಾವು ನುಗ್ಗಿರುವ ಬಗ್ಗೆ ಅಕ್ಕ-ಪಕ್ಕದವರಿಗೆ ಮಾಹಿತಿ ನೀಡಿದರು. ಹಾವು ನೋಡಲು ಜನ ಜಮಾಯಿಸಿದ್ದು, ಅಲ್ಲಿದ್ದ ಒಬ್ಬರು ಉರಗ ತಜ್ಞ ಅಕ್ಬರ್ ಅವರಿಗೆ ಫೋನ್ ಮಾಡಿದರು.

ಮನೆ ಹಿಂದೆ ಅಡಗಿದ್ದ ಹಾವನ್ನು ಅಕ್ಪರ್ ಅವರು ಉಪಾಯವಾಗಿ ಹಿಡಿದರು `ಹಾವು ಯಾರಿಗೂ ಅನಗತ್ಯವಾಗಿ ತೊಂದರೆ ಮಾಡುವುದಿಲ್ಲ. ಹೀಗಾಗಿ ಭಯಪಡುವುದು ಬೇಡ' ಎಂದು ಅಕ್ಬರ್ ಅಲ್ಲಿದ್ದವರಿಗೆ ಮನವರಿಕೆ ಮಾಡಿದರು. ನಾಗರ ಹಾವನ್ನು ಹಿಡಿದ ಅವರು ಹಾವಿನ ವಿಶೇಷತೆಗಳ ಬಗ್ಗೆ ನೆರೆದಿದ್ದವರಿಗೆ ಪರಿಚಯಿಸಿದರು.

ಅಲ್ಲಿ ನೆರೆದಿದ್ದ ಮಹಿಳೆ-ಮಕ್ಕಳಿಗೂ ಹಾವಿನ ಗುಣಧರ್ಮಗಳನ್ನು ಪರಿಚಯಿಸಿದರು. ಅದಾದ ನಂತರ ಹಾವನ್ನು ಚೀಲದಲ್ಲಿ ತುಂಬಿ ಸಮೀಪದ ಕಾಡಿಗೆ ಬಿಟ್ಟರು.