
0:00:00
2025-04-18
ಪಾತಿ ದೋಣಿಯಿಂದ ನೀರಿಗೆ ಬಿದ್ದು ಗಣಪತಿ ಮೊಗೇರ್ ದುರ್ಮರಣ
News Details
ಪಾತಿ ದೋಣಿ ಮೂಲಕ ಅರಬ್ಬಿ ಸಮುದ್ರಕ್ಕೆ ಹೋದ ಗಣಪತಿ ಮೊಗೇರ್ (47) ದೋಣಿಯಿಂದ ನೀರಿಗೆ ಬಿದ್ದು ಸಾವನಪ್ಪಿದ್ದಾರೆ.
ಭಟ್ಕಳ ತಾಲೂಕಿನ ಮುರುಡೇಶ್ವರ ಬಳಿಯ ಕಾಯ್ಕಿಣಿ ಮಠದ ಹಿತ್ಲು ಸಮೀಪದ ತಂಡ್ಲಮನೆಯಲ್ಲಿ ಗಣಪತಿ ಮೊಗೇರ್ ವಾಸವಾಗಿದ್ದರು. ಏಪ್ರಿಲ್ 16ರ ಸಂಜೆ ಅವರು ದೋಣಿ ಮೂಲಕ ಮೀನು ಹಿಡಿಯಲು ಸಮುದ್ರಕ್ಕೆ ಹೋಗಿದ್ದರು. ದೊಡ್ಡ ಅಲೆಯೊಂದು ದೋಣಿಗೆ ಅಪ್ಪಳಿಸಿದ್ದರಿಂದ ಗಣಪತಿ ಮೊಗೇರ್ ಆಯತಪ್ಪಿ ನೀರಿಗೆ ಬಿದ್ದರು. ಮತ್ತೆ ಮೇಲೆಳಲು ಅವರಿಗೆ ಸಾಧ್ಯವಾಗಲಿಲ್ಲ. ಅವರ ಸಹೋದರ ನಾಗೇಶ ತಂಡ್ಲಮನೆ ಈ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.