Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-18

ಶಿರಸಿ ಕಾಗೇರಿ ಅರಣ್ಯದಲ್ಲಿ ವಿದ್ಯುತ್ ಆಘಾತದಿಂದ ಚಿರತೆ ಸಾವು

News Details

ಶಿರಸಿಯ ಕಾಗೇರಿ ಅರಣ್ಯ ಪ್ರದೇಶದಲ್ಲಿ ಚಿರತೆಯೊಂದು ಸಾವನಪ್ಪಿದೆ. ವಿದ್ಯುತ್ ಅವಘಡದಿಂದ ಚಿರತೆ ಸಾವನಪ್ಪಿರುವುದು ಖಚಿತವಾಗಿದೆ.

ಕಾಗೇರಿ ಗ್ರಾಮ ಹಲಸಿನಕೈ ಬೆಟ್ಟದಲ್ಲಿ ಶುಕ್ರವಾರ ಚಿರತೆಯ ಶವ ಸಿಕ್ಕಿದೆ. ನಾಲ್ಕು ವರ್ಷದ ಗಂಡು ಚಿರತೆ ಇದಾಗಿದೆ. ಅರಣ್ಯ ಸರ್ವೇ ನಂಬರ್ 160ರಲ್ಲಿ ಚಿರತೆ ಸಾವನಪ್ಪಿದ ಸುದ್ದಿ ಕೇಳಿ ಅರಣ್ಯ ಸಿಬ್ಬಂದಿ ಅಲ್ಲಿ ದೌಡಾಯಿಸಿದರು. ಚಿರತೆಯ ದೇಹ ಕೊಳೆತ ಸ್ಥಿತಿಯಲ್ಲಿರುವುದು ಕಾಣಿಸಿತು.

ಪಶುವೈಧ್ಯ ಡಾ ಪ್ರಶಾಂತ ಅವರು ಚಿರತೆಯ ಶವರ ಪರೀಕ್ಷೆ ಮಾಡಿದರು. ಆ ವೇಳೆ ವಿದ್ಯುತ್ ಆಘಾತದಿಂದ ಚಿರತೆ ಸಾವನಪ್ಪಿರುವ ಸತ್ಯ ಹೊರಬಂದಿತು. ಡಿಎಫ್‌ಓ ಅಜ್ಜಯ್ಯ, ಎಸಿಎಫ್ ಎಸ್ ಎಸ್ ನಿಂಗಾಣಿ ಕಾನೂನು ಕ್ರಮ ಜರುಗಿಸಿದರು. ಆರ್‌ಎಫ್‌ಓ ಗಿರೀಶ ನಾಯ್ಕ ಸ್ಥಳ ಪರಿಶೀಲನೆ ನಡೆಸಿ ಚಿರತೆಯ ದೇಹ ವಿಲೆವಾರಿ ನಡೆಸಿದರು.