Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-21

ಸಿದ್ದಾಪುರದ ಮಂಡಗಳಲೆ ಮತ್ತು ಹಸರಗೋಡಿನ ಹೊಸಗದ್ದೆಯಲ್ಲಿ ಮದ್ಯ ಮಾರಾಟದ ವಿರುದ್ಧ ಪೋಲಿಸರ ಕ್ರಮ

News Details

ಸಿದ್ದಾಪುರದ ಮಂಡಗಳಲೆ ಜಗನ್ನಾಥ ಮಡಿವಾಳ ಹಾಗೂ ಹಸರಗೋಡಿನ ಹೊಸಗದ್ದೆಯ ವೆಂಕಟೇಶ ನಾಯ್ಕ ತಮ್ಮ ಮನೆಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದು, ಪೊಲೀಸರು ಅದನ್ನು ತಡೆದಿದ್ದಾರೆ.

ಸಿಪಿಐ ಜೆಬಿ ಸೀತಾರಾಮ ಅವರು ವೆಂಕಟೇಶ ನಾಯ್ಕ ಅವರ ಮನೆ ಮೇಲೆ ದಾಳಿ ನಡೆಸಿದಾಗ ಮನೆ ಮುಂದೆ ಸಾರ್ವಜನಿಕರಿಗೆ ಸರಾಯಿ ವಿತರಿಸುತ್ತಿರುವುದು ಕಾಣಿಸಿತು. ಮನೆಯೊಳಗೆ ವಿವಿಧ ಮದ್ಯದ ಪ್ಯಾಕೇಟುಗಳು ಇದ್ದವು. ಆದರೆ, ಮದ್ಯ ಮಾರಾಟಕ್ಕೆ ಅನುಮತಿ ಪತ್ರ ಮಾತ್ರ ಸಿಗಲಿಲ್ಲ. ಪಿಎಸ್‌ಐ ಅನೀಲ ಬಿ ಎಂ ಅವರು ಜಗನ್ನಾಥ ಮಡಿವಾಳ ಅವರ ಮನೆ ಬಳಿ ತೆರಳಿದಾಗಲೂ ಅಲ್ಲಿ ಕೆಲವರು ಮದ್ಯ ಸೇವನೆಯಲ್ಲಿ ನಿರತರಾಗಿದ್ದರು. ಅವರ ಮನೆಯಲ್ಲಿಯೂ ಸರಾಯಿ ಪ್ಯಾಕೆಟ್ ಸಿಕ್ಕಿದವು. ಈ ಹಿನ್ನಲೆ ಪೊಲೀಸರು ಆ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿದರು.