
0:00:00
2025-04-21
ಶಿರಸಿಯಲ್ಲಿ ಗಾಂಜಾ ಸೇವನೆ: ಪೊಲೀಸರಿಂದ ಕಠಿಣ ಕ್ರಮ
News Details
ಬೀಡಿ-ಸಿಗರೇಟಿನ ಅಮಲು ಸಾಕಾಗದೇ ಶಿರಸಿಯ ವಿರಾಲ್ ಶೆಟ್ಟಿ ಗಾಂಜಾ ಮೊರೆ ಹೋಗಿದ್ದು, ಕಠಿಣ ಕ್ರಮ ಜರುಗಿಸುವ ಮೂಲಕ ಪೊಲೀಸರು ಅವರ ನಶೆ ಇಳಿಸಿದ್ದಾರೆ.
ಶಿರಸಿಯ ನಾರಾಯಣಗುರು ವಿರಾಲ್ ಈಶ್ವರ ಶೆಟ್ಟಿ ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದರು. ಪೊಲೀಸರನ್ನು ಕಂಡ ತಕ್ಷಣ ಅವರು ಇನ್ನಷ್ಟು ಭಯಗೊಂಡರು. ಅಮಲಿನಲ್ಲಿದ್ದ ಅವರನ್ನು ಪೊಲೀಸರು ವಶಕ್ಕೆಪಡೆದು ವೈದ್ಯಕೀಯ ಪರೀಕ್ಷೆಗೆ ರವಾನಿಸಿದರು. ಆಗ, ವಿರಾಲ್ ಶೆಟ್ಟಿ ಗಾಂಜಾ ಸೇವಿಸಿರುವುದು ದೃಢವಾಯಿತು.
ಈ ಹಿನ್ನಲೆ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು. ಗಾಂಜಾ ಸೇವನೆಯ ಅಪಾಯಕಾರಿ ಅಂಶಗಳ ಬಗ್ಗೆ ಮನವರಿಕೆಯನ್ನು ಮಾಡಿದರು. ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆ ಪಿಎಸ್ಐ ರಾಜಕುಮಾರ ಉಕ್ಕಲಿ, ಸಿಬ್ಬಂದಿ ಮಾಂತೇಶ ಬಾರ್ಕೆರ್, ಪ್ರಸಾದ ಮಡಿವಾಳ, ಮಲ್ಲಿಕಾರ್ಜುನ ಕೊಂಡೊಜಿ, ಮಂಜುನಾಥ ವಾಲಿ, ಹನುಮಂತ ವಾಲಿಕರ್ ಈ ಕಾರ್ಯಾಚರಣೆಯಲ್ಲಿದ್ದರು.