Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-22

ಶಿರಸಿಯಲ್ಲಿ ಗಾಂಜಾ ಸೇವಿಸುತ್ತಿದ್ದ ಚಾಲಕ ಮತ್ತು ವ್ಯಾಪಾರಿ ಪೊಲೀಸರ ಜಾಲದಲ್ಲಿ

News Details

ಶಿರಸಿ ಜೂ ಸರ್ಕಲ್ ಬಳಿಯ ಆನೆಹೊಂಡ ಕೆರೆ ಅಂಚಿನಲ್ಲಿ ಗಾಂಜಾ ಸೇವಿಸುತ್ತಿದ್ದ ಚಾಲಕ ಕಿರಣಕುಮಾರ್ ಹಾಗೂ ವ್ಯಾಪಾರಿ ರಕ್ಷಿತ್ ಬೆಳಗಾಂವ್ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ. ಆ ಇಬ್ಬರಿಗೂ ಕಾನೂನು ಪಾಠ ಮಾಡಿದ ಪೊಲೀಸರು ಗಾಂಜಾ ನಶೆ ಬಿಡಿಸಿದ್ದಾರೆ.

ಸೋಮವಾರ ಸಂಜೆ ಶಿರಸಿ ನಗರಠಾಣೆ ಪಿಎಸ್‌ಐ ನಾಗಪ್ಪ ಬಿ ಅವರು ನಗರ ಸಂಚಾರ ನಡೆಸುತ್ತಿದ್ದರು. ಆನೆಹೊಂಡಕ್ಕೆ ಹೋಗುವ ರಸ್ತೆ ಬದಿ ಇಬ್ಬರು ಅನುಮಾನಾಸ್ಪದವಾಗಿ ವರ್ತಿಸುತ್ತಿರುವ ಬಗ್ಗೆ ಅವರಿಗೆ ಮಾಹಿತಿ ಬಂದಿತು. ಈ ಹಿನ್ನಲೆ ತಮ್ಮ ಪೊಲೀಸ್ ತಂಡದೊoದಿಗೆ ಅವರು ಅಲ್ಲಿ ತೆರಳಿದರು.

ಶಿರಸಿಯ ಗಣೇಶನಗರ ಕಿರಣಕುಮಾರ ಸುಭಾಷ ಜೋಗಳೆಕರ್ ಹಾಗೂ ಅರೆಕೊಪ್ಪದ ರಕ್ಷಿತ್ ರಾಮು ಬೆಳಗಾಂವ ಅಲ್ಲಿ ನಶೆಯಲ್ಲಿದ್ದರು. ಪೊಲೀಸ್ ಸಿಬ್ಬಂದಿ ನಾರಾಯಣ ರಾಠೋಡ್, ಹನುಮಂತ ಕಬಾಡಿ, ಸತೀಶ್ ಅಂಬಿಗ, ಸದ್ದಾಂ ಹುಸೇನ್, ಮಲ್ಲಿಕಾರ್ಜುನ ಕುದರಿ, ಶಿವಲಿಂಗ ತುಪ್ಪದ ಹಾಗೂ ರಾಜಶೇಖರ ಅಂಗಡಿ ಸೇರಿ ಆ ಇಬ್ಬರನ್ನು ಒಂದಷ್ಟು ಹೊತ್ತು ಮಾತನಾಡಿಸಿದರು.

ಪೊಲೀಸರ ಪ್ರಶ್ನೆಗೆ ಉತ್ತರಿಸುವಷ್ಟು ತಾಳ್ಮೆ ಅವರಿಗಿರಲಿಲ್ಲ. ಗಾಂಜಾ ಸೇವನೆಯ ಅನುಮಾನದ ಹಿನ್ನಲೆ ನಾಗಪ್ಪ ಬಿ ಅವರು ಆ ಇಬ್ಬರನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಿದರು. ಪೊಲೀಸರ ನಿರೀಕ್ಷೆಯಂತೆ ಅವರಿಬ್ಬರೂ ಗಾಂಜಾ ಸೇವಿಸಿದನ್ನು ವೈದ್ಯರು ದೃಢಪಡಿಸಿದರು. ತಕ್ಷಣ ಆ ಇಬ್ಬರನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದರು.