Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-23

ಮುಂಡಗೋಡ: ಹೀರೆಕೆರೆಯಲ್ಲಿ ಮೀನುಗಳ ಸಮೂಹ ಸಾವು – ಕಾರಣ ಅನಿಶ್ಚಿತ

News Details

ಮುಂಡಗೋಡಿನ ಚಿಗಳ್ಳಿಯ ಹೀರೆಕೆರೆಯಲ್ಲಿನ ಮೀನುಗಳು ಏಕಾಏಕಿ ಸಾವನಪ್ಪುತ್ತಿವೆ. ಮೀನುಗಳ ಸಾವಿಗೆ ಕಾರಣ ಗೊತ್ತಾಗುತ್ತಿಲ್ಲ.

ಇಲ್ಲಿನ ಸರ್ವೇ ನಂ 49ರಲ್ಲಿ ಕೆರೆ ಇದೆ. ಮೌಲಾಲಿ ಮುಕಂದರ್ ಎಂಬಾತರು ಮೀನು ಸಾಕಾಣಿಕೆಗಾಗಿ ಈ ಕೆರೆಯನ್ನು ಟೆಂಡರ್ ಪಡೆದಿದ್ದಾರೆ. ಕೆರೆಯಲ್ಲಿ ವಿವಿಧ ಬಗೆಯ ಮೀನುಗಳನ್ನು ಅವರು ಬಿಟ್ಟಿದ್ದು, ಅವೆಲ್ಲವೂ ಇದೀಗ ಸಾವನಪ್ಪುತ್ತಿದೆ. ಮೀನುಗಳ ಅನುಮಾನಾಸ್ಪದ ಸಾವಿನಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಮೊನ್ನೆ ಒಂದೆರಡು ಮೀನುಗಳು ಮಾತ್ರ ಸಾವನಪ್ಪಿದ್ದವು. ಮಂಗಳವಾರ ನೂರಾರು ಮೀನುಗಳು ಸಾವನಪ್ಪಿರುವುದು ಗಮನಕ್ಕೆ ಬಂದಿದೆ. ಈ ಮೀನುಗಳ ಸಾವಿಗೆ ಕಾರಣ ಗೊತ್ತಾಗಿಲ್ಲ. ಮೀನುಗಳ ಸಾವಿನಿಂದ ಟೆಂಡರ್ ಪಡೆದವರು ನಷ್ಟ ಅನುಭವಿಸಿದ್ದಾರೆ.