Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-23

ಚಿಕ್ಕಮಾವಳ್ಳಿಯಲ್ಲಿ ಲಾರಿ ಬೈಕ್‌ಗೆ ಗುದ್ದಿ ಪರಾರಿ: ಮಹೇಶ್ ಹೆಗಡೆಗೆ ಗಾಯ

News Details

ಹುಬ್ಬಳ್ಳಿಯಿಂದ ಯಲ್ಲಾಪುರ ಕಡೆ ಸಂಚರಿಸುತ್ತಿದ್ದ ಲಾರಿ ಚಿಕ್ಕಮಾವಳ್ಳಿಯ ನಾರಾಯಣ ಹೆಗಡೆ ಅವರ ಬೈಕಿಗೆ ಗುದ್ದಿ ಪರಾರಿಯಾಗಿದೆ. ಪರಿಣಾಮ ನಾರಾಯಣ ಹೆಗಡೆ ಅವರ ಮಗ ಮಹೇಶ ಹೆಗಡೆ ಅವರಿಗೆ ಗಾಯವಾಗಿದೆ.

ಏಪ್ರಿಲ್ 13ರಂದು ನಾರಾಯಣ ಹೆಗಡೆ ಅವರು ತಮ್ಮ ಮಗ ಮಹೇಶ ಹೆಗಡೆ ಅವರ ಜೊತೆ ಬೈಕಿನಲ್ಲಿ ಯಲ್ಲಾಪುರಕ್ಕೆ ಬರುತ್ತಿದ್ದರು. ಹಿಂದಿನಿAದ ಜೋರಾಗಿ ಬಂದ ಲಾರಿ ಜಮಗುಳಿ ಕ್ರಾಸಿನ ಬಳಿ ಬೈಕಿನ ಹ್ಯಾಂಡಲ್‌ಗೆ ಗುದ್ದಿತು. ಪರಿಣಾಮ ಬೈಕಿನಲ್ಲಿದ್ದ ನಾರಾಯಣ ಹೆಗಡೆ ಹಾಗೂ ಮಹೇಶ ಹೆಗಡೆ ನೆಲಕ್ಕೆ ಬಿದ್ದರು. ಆಗ ಮಹೇಶ ಹೆಗಡೆ ಅವರು ಕೈ'ಗೆ ಪೆಟ್ಟಾಯಿತು.

ಅಪಘಾತದ ಬಗ್ಗೆ ಅರಿವಾದರೂ ಲಾರಿ ಚಾಲಕ ತನ್ನ ವಾಹನ ನಿಲ್ಲಿಸಲಿಲ್ಲ. ಬೈಕಿನಲ್ಲಿದ್ದವರು ಪೆಟ್ಟು ಮಾಡಿಕೊಂಡರು ಅವರನ್ನು ಉಪಚರಿಸಲಿಲ್ಲ. ಅಪಘಾತ ನಡೆದ ಬಗ್ಗೆ ಪೊಲೀಸರಿಗೆ ಸಹ ಮಾಹಿತಿ ನೀಡಲಿಲ್ಲ. ಲಾರಿ ಚಾಲಕ ತಪ್ಪು ಮಾಡಿ ಪರಾರಿಯಾಗಿದ್ದರಿಂದ ನಾರಾಯಣ ಹೆಗಡೆ ಅವರು ಸಿಟ್ಟಾದರು. ಲಾರಿಯ ನೋಂದಣಿ ಸಂಖ್ಯೆಯನ್ನು ಬರೆದಿಟ್ಟುಕೊಂಡರು. ಮಗನಿಗೆ ಚಿಕಿತ್ಸೆ ಕೊಡಿಸಿದ ನಂತರ ಊರಿಗೆ ಬಂದು ಅಪಘಾತದ ಬಗ್ಗೆ ಚರ್ಚಿಸಿದರು.

ಊರಿನವರು ನೀಡಿದ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಅವರು ಪೊಲೀಸ್ ಠಾಣೆಗೆ ಹೋದರು. ಅಪಘಾತನಡೆಸಿ ಪರಾರಿಯಾದ ಲಾರಿ ಚಾಲಕನಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪರಾರಿಯಾದ ಲಾರಿ ಚಾಲಕನ ಹುಡುಕಾಟ ನಡೆಸಿದ್ದಾರೆ.