Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-24

ಅರಣ್ಯ ಹಕ್ಕು ಕ್ಷೇತ್ರದಲ್ಲಿ ಗುಂಡಿ ತೋಡು: ಹೋರಾಟಗಾರರ ಖಂಡನೆ

News Details

ಅರಣ್ಯ ಹಕ್ಕು ಕಾಯಿದೆ ಅಡಿ ಅರ್ಜಿ ಸಲ್ಲಿಸಿ ಸಾಗುವಳಿ ಮಾಡುತ್ತಿದ್ದ ಕ್ಷೇತ್ರದಲ್ಲಿ ಅರಣ್ಯ ಸಿಬ್ಬಂದಿ ಕಾಡು ಗಿಡ ನೆಡಲು ಗುಂಡಿ ತೋಡಿದ್ದು, ಹೋರಾಟಗಾರರ ವೇದಿಕೆ ಇದನ್ನು ಖಂಡಿಸಿದೆ. ಹೊನ್ನಾವರದ ವಿವಿಧ ಕಡೆ ಅರಣ್ಯ ಇಲಾಖೆ ಗುಂಡಿ ತೋಡಿರುವುದಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಸದಸ್ಯರು ಅಸಮಧಾನ ಹೊರಹಾಕಿದ್ದಾರೆ.

ಗುರುವಾರ ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹಾಗೂ ಅವರ ಸಹಚರರು ಗುಂಡಿ ತೆಗೆದ ಕ್ಷೇತ್ರ ಸರ್ವೇ ನಡೆಸಿದರು. ಗುಂಡಿಯ ಆಳ-ಅಗಲ ವೀಕ್ಷಿಸಿದ ಅವರು ಅರಣ್ಯ ಸಿಬ್ಬಂದಿ ನಡವಳಿಕೆಯನ್ನು ಪ್ರಶ್ನಿಸಿದರು. `ಅರಣ್ಯವಾಸಿಗಳ ಸಾಗುವಳಿಗೆಗೆ ಆತಂಕ ಮಾಡದಂತೆ ನಿರ್ದೇಶನ ನೀಡಬೇಕು' ಎಂದು ಹಿರಿಯ ಅಧಿಕಾರಿಗಳನ್ನು ಆಗ್ರಹಿಸಿದರು.

ಆ ಭಾಗದ ಸಹಾಯಕ ಸಂರಕ್ಷಣಾಧಿಕಾರಿ ಲೋಹಿತ ಅವರನ್ನು ಹೋರಾಟಗಾರರು ಭೇಟಿ ಮಾಡಿ ತಮ್ಮ ಬೇಡಿಕೆಗಳ ಪಟ್ಟಿ ಸಲ್ಲಿಸಿದರು. ಮುಂದಿನ 8 ದಿನದ ಒಳಗೆ ಸೂಕ್ತ ಕ್ರಮ ಜರುಗಿಸದೇ ಇದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಹೊನ್ನಾವರದ ಸಾಲ್ಕೋಡ, ಜಲವಳ್ಳಿ ಕರ್ಕಿ, ಮಾಗೋಡ ಭಾಗದ ಜನರು ಇದಕ್ಕೆ ಧ್ವನಿಗೂಡಿಸಿದರು.

ಹೋರಾಟ ವೇದಿಕೆ ನಿಯೋಗದಲ್ಲಿ ಸಂಚಾಲಕ ಮಹೇಶ ನಾಯ್ಕ ಕಾನಕ್ಕಿ, ಕುಮಟಾ ಅಧ್ಯಕ್ಷ ಮಂಜುನಾಥ ಮರಾಠಿ, ಪ್ರಮುಖರಾದ ವಿನೋದ ನಾಯ್ಕ ಯಲ್ಕೊಟಗಿ, ಸುರೇಶ ನಗರಬಸ್ತಿಕೇರಿ, ಲಂಬೋದರ ನಾಯ್ಕ, ಮಾದೇವ ಮರಾಠಿ, ಅನಿತಾ ಲೋಫೀಸ್, ಸಂತೋಷ ನಾಯ್ಕ, ಶಾಂತಾನ್ ಪಿಂಟೋ, ಮೋಹನ ನಾಯ್ಕ, ವಿಘೇಶ್ವರ ಹೆರಂಗಡಿ, ಜನಾರ್ಧನ ನಾಯ್ಕ, ಥಾಮಸ ಲೋಬೋ, ಗಣೇಶ ನಾಯ್ಕ, ಚಂದ್ರಹಾಸ ನಾಯ್ಕ, ಹೇಮಲತಾ ನಾಯ್ಕ ಸಹ ಜೊತೆಗಿದ್ದರು.