Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-25

ಅವಜ್ಞೆಯೆಡೆಗೆ ಮೌಲ್ಯಭರಿತ ಬಲಿ: ಗೋಕರ್ಣದಲ್ಲಿ ಇಬ್ಬರು ಯುವತಿಯರ ಸಾವು

News Details

ಗೋಕರ್ಣ ಪ್ರವಾಸಕ್ಕೆ ಬಂದಿದ್ದ ಯುವತಿಯರಿಬ್ಬರು ಸಮುದ್ರಕ್ಕೆ ಬಿದ್ದು ಸಾವನಪ್ಪಿದ್ದಾರೆ. ಟೂರ್ ಗೈಡ್ಸ್ ಮತ್ತು ಟೂರ್ & ಟ್ರಾವೆಲ್ಸ್ ಮಾಲಕರ ನಿರ್ಲಕ್ಷದಿಂದ ಈ ಸಾವು ಸಂಭವಿಸಿದೆ.

ತಮಿಳುನಾಡಿನ ತಿರುಚಿಯ ಎಸ್ ಆರ್ ಎಂ ಮೆಡಿಕಲ್ ಕಾಲೇಜಿನ 23 ವಿದ್ಯಾರ್ಥಿಗಳು ಗುರುವಾರ ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದರು. ದಾಂಡೇಲಿ, ವಿಭೂತಿ ಜಲಪಾತ ವೀಕ್ಷಣೆ ನಂತರ ಅವರು ಗೋಕರ್ಣ ಪ್ರವೇಶಿಸಿದ್ದರು. ಎಂಬಿಬಿಎಸ್ ಮುಗಿಸಿದ ಖುಷಿಯಲ್ಲಿ ಅವರೆಲ್ಲರೂ ಚಾರಣಕ್ಕೆ ಸಜ್ಜಾಗಿದ್ದರು. ಸಮುದ್ರ ಅಂಚಿನ ಕಣಿವೆ ಪ್ರದೇಶದಲ್ಲಿ ಅವರು ಚಾರಣ ನಡೆಸಿದ್ದರು. ಸಂಜೆ ವೇಳೆ ಜಟಾಯು ತೀರ್ಥದ ಬಳಿ ತೆರಳುತ್ತಿದ್ದವರು ಅಲ್ಲಿನ ಕಲ್ಪಂಬೆ ಮೇಲೆ ಕೂತು ಆಯಾಸ ನೀಗಿಸಿಕೊಳ್ಳುತ್ತಿದ್ದರು.

ಆಗ ಅಪ್ಪಳಿಸಿದ ಅಲೆ ನಾಲ್ವರನ್ನು ಸಮುದ್ರಕ್ಕೆ ಎಸೆಯಿತು. ಆ ಪೈಕಿ ಕನ್ನಿಮೂಳಿ ಈಶ್ವರನ್ ಹಾಗೂ ಹಿಂದುಜಾ ನಟರಾಜನ್ ಎಂಬಾತರು ಅಲೆಗಳ ಅಬ್ಬರಕ್ಕೆ ಸಿಲುಕಿ ಸಾವನಪ್ಪಿದರು. ಉಳಿದ ಇಬ್ಬರು ಸಾಕಷ್ಟು ಗುದ್ದಾಟ ನಡೆಸಿ ಜೀವ ಉಳಿಸಿಕೊಂಡರು. ಆಳವಾದ ಸಮುದ್ರ ಹಾಗೂ ಕಲ್ಬಂಡೆಗಳ ಪರ್ವತದ ನಡುವೆ ಸಿಲುಕಿದ್ದ ಶವವನ್ನು ಹೊರ ತೆಗೆಯಲು ರಕ್ಷಣಾ ಸಿಬ್ಬಂದಿ ಹರಸಾಹಸ ನಡೆಸಿದರು. ಕುಡ್ಲೆ ತೀರಕ್ಕೆ ಶವ ಬಂದ ನಂತರ ಅದನ್ನು ಆಸ್ಪತ್ರೆಗೆ ಸಾಗಿಸಲಾಯಿತು.

ಟೂರಿಸ್ಟ್ ಗೈಡ್ ಗಾಂಧಿ ಸಿವಕುಮಾರನ್ ವಿರುದ್ಧ ವಿದ್ಯಾರ್ಥಿನಿ ಅತೀಥಾ ಟಿ ಎಸ್ ದೂರು ನೀಡಿದ್ದಾರೆ.