Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
13:05:00 2025-03-20

ಶಿರಸಿಯ ಹುಲೆಕಲ್ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರ ಕಡಿದ ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಮಾಡಿದ್ದಾರೆ.

News Details

ಶಿರಸಿಯ ಹುಲೆಕಲ್ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರ ಕಡಿದ ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಅರಣ್ಯಾಧಿಕಾರಿಗಳು ಆ ಮೂವರನ್ನು ಬಂಧಿಸಿ ಪರಿಸರದ ಪಾಠ ಮಾಡಿದ್ದಾರೆ. ಸಿಂಗನಹಳ್ಳಿ ಗ್ರಾಮದ ಅರಣ್ಯದಲ್ಲಿ ಶ್ರೀಗಂಧದ ಮರಗಳಿರುವುದನ್ನು ಅದೇ ಊರಿನ ಸುಬ್ರಾಯ ನಾಯ್ಕ ನೋಡಿದ್ದರು. ಆ ಮರ ಕಡಿದು ಮಾರಾಟ ಮಾಡಿದರೆ ಬೇಗ ಶ್ರೀಮಂತರಾಗಬಹುದು ಎಂದು ಅವರು ಅಂದಾಜಿಸಿದ್ದರು. ಈ ಬಗ್ಗೆ ಸ್ನೇಹಿತ ರಾಮ ನಾಯ್ಕ ಹಾಗೂ ಬನವಾಸಿ ರಸ್ತೆಯ ಗಡಳ್ಳಿ ಕ್ರಾಸ್ ಬಿಳಿಗಿರಿ ಕೊಪ್ಪದ ಅಬ್ದುಲ್ ಸಾಬ್ ಬಳಿ ಹೇಳಿಕೊಂಡಿದ್ದರು. ನoತರ ಆ ಮೂವರು ಸೇರಿ ಅಕ್ರಮವಾಗಿ ಕಾಡು ಪ್ರವೇಶಿಸಿದ್ದರು. ಅಲ್ಲಿಂದ ಶ್ರೀಗಂಧದ ಮರ ಕಡಿದಿದ್ದರು. ಆ ಮರವನ್ನು ಹಲವು ತುಂಡುಗಳನ್ನಾಗಿಸಿದ್ದರು. ನಂತರ ಅದನ್ನು ಕಾಡಿನಿಂದ ಸಾಗಿಸಿ ಸಿಕ್ಕಿ ಬಿದ್ದರು. ಹುಲೇಕಲ್ ವಲಯ ಅರಣ್ಯ ಅಧಿಕಾರಿ ಶಿವಾನಂದ್ ನಿಂಗಾಣಿ ನೇತೃತ್ವದ ಅರಣ್ಯ ಸಿಬ್ಬಂದಿ ಆ ಮೂವರನ್ನು ಬಂಧಿಸಿದರು. 41 ಸಾವಿರ ರೂ ಮೌಲ್ಯದ ಮರದ ತುಂಡುಗಳನ್ನು ವಶಕ್ಕೆ ಪಡೆದರು. ಜೊತೆಗೆ ಅವರ ಬಳಿಯಿದ್ದ ಕತ್ತಿ, ಗರಗಸ, ನೀರಿನ ಬಾಟಲಿಗಳನ್ನು ಮುಖ್ಯ ಸಾಕ್ಷಿಯಾಗಿ ಅರಣ್ಯಾಧಿಕಾರಿಗಳು ಪರಿಗಣಿಸಿದರು.