
ಗೋಕರ್ಣದಲ್ಲಿ ಕೋಮಾರಪಂಥರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು
News Details
ಗೋಕರ್ಣ: ಕೋಮಾರಪಂಥ ಸಮಾಜದವರು ವಾರ್ಷಿಕವಾಗಿ ಮಹಾಬಲೇಶ್ವರ ಮಂದಿರದಲ್ಲಿ ನೆರವೇರಿಸುವ ರಥೋತ್ಸವ ಅಮಾವಾಸ್ಯೆ ದಿನವಾದ ರವಿವಾರ ರಾತ್ರಿ ವಿಜೃಂಭಣೆಯಿAದ ನಡೆಯಿತು.
ಮುಂಜಾನೆ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ ನಂತರ ಸಂಜೆ ವೆಂಕಟ್ರಮಣ ಮಂದಿರದಿAದ ಈ ಸಮಾಜದವರಯ ಮೆರವಣಿಗೆ ನಡೆಸಿ ಮಹಾಬಲೇಶ್ವರ ಮಂದಿರಕ್ಕೆ ಆಗಮಿಸಿ ಪೂಜೆ ನೆರವೇರಿಸಿದ ಬಳಿಕ ರಾತ್ರಿ ಶ್ರೀದೇವರ ಉತ್ಸವ ರಥಬೀದಿಗೆ ಆಗಮಿಸಿ ಸಾರ್ವಭೌಮ ರಥಾರೋಢವಾದ ಬಳಿಕ ರಥವನ್ನ ವೆಂಕಟ್ರಮಣ ದೇವಾಲಯದವರೆಗೆ ತೆರಳಿ ಮರಳಿತು.
ಮಂದಿರದ ಅರ್ಚಕರಾದ ವೇ. ಅಮೃತೇಶ ಹಿರೇ ಪೂಜಾ ಕೈಂಕರ್ಯ ನೆರವೇರಿಸಿದರು.
ಈ ಸಮಾಜದವರು ಹಾಗೂ ಉಳಿದ ಭಕ್ತವೃಂದದವರು ಜಯಘೋಷದೊಂದಿಗೆ ರಥ ಎಳೆದು ಸಂಭ್ರಮಿಸಿ ಮಹಾದೇವನಿಗೆ ವಂದಿಸಿದರು.
ಶತಮಾನಗಳ ಹಿಂದೆ ಈ ಸಮಾಜದವರು ಮಹಾಬಲೇಶ್ವರ ಮಂದಿರಕ್ಕೆ ಬೆಳ್ಳಿ ಕಳಸ (ಕೊಡ) ವನ್ನ ನೀಡಿದ್ದರು. ವೈಶಾಖ ಅಮಾವಾಸ್ಯೆಯ ಈ ದಿನದಂದು ಪ್ರತಿ ವರ್ಷ ಆತ್ಮಲಿಂಕ್ಕೆ ಅಭಿಷೇಕ ಸಲ್ಲಿಸಿ ರಥೋತ್ಸವ ನಡೆಸುತ್ತಾ ಬಂದಿದ್ದು ಅದರಂತೆ ನಡೆಯಿತು.ಮಂದಿರದ ಮೇಲುಸ್ತುವಾರಿ ಸಮಿತಿ ಮಾರ್ಗದರ್ಶನದಲ್ಲಿ ನಡೆದ ರೂಢಿಗತ ರಥೋತ್ಸವದಲ್ಲಿ ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯರು, ವ್ಯವಸ್ಥಾಪಕರು, ಸಿಬ್ಬಂದಿ ವರ್ಗದವರು , ಕೋಮಾರ ಪಂಥ ಸಮಾಜದ ಪ್ರಮುಖರು, ಜಿಲ್ಲೆಯ ವಿವಿದಡೆಯಲ್ಲಿರುವ ಹಾಗೂ ಗೋವಾ ಮತ್ತಿತರ ಕಡೆಯಿಂದ ಆಗಮಿಸಿದ ಕೋಮಾರಪಂಥ ಸಮಾಜದವರು ಪಾಲ್ಗೊಂಡಿದ್ದರು.