Loading...
  • aksharakrantinagarajnaik@gmail.com
  • +91 8073197439
Total Visitors: 2788
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-05-01

ಅಂಕೋಲಾದಲ್ಲಿ ಭಿನ್ನ ಜಾಗೃತಿ ಅಭಿಯಾನ

News Details

ಕಾಶ್ಮೀರದಲ್ಲಿ ನಡೆದ ಭಯೋತ್ಪಾದನಾ ದಾಳಿ ಖಂಡಿಸಿ ಅಂಕೋಲಾದಲ್ಲಿ ಕೆಲಸ ಮಾಡುವ ಸರ್ಕಾರಿ ಸಿಬ್ಬಂದಿಯೊಬ್ಬರು ವಿಭಿನ್ನವಾಗಿ ಜನ ಜಾಗೃತಿ ನಡೆಸುತ್ತಿದ್ದಾರೆ.

ಭೂ ಮಾಪನಾ ಇಲಾಖೆಯ ನೌಕರ ರಾಘವ ನಾಯಕ ಅವರು ಅಂಕೋಲಾದ ಹಲವು ಕಡೆ ಪಾಕಿಸ್ತಾನದ ವಿರುದ್ಧ ಚಿತ್ರ ಬಿಡಿಸಿದ್ದಾರೆ. ಪಾಕಿಸ್ತಾನದವರನ್ನು ಅಶ್ಲೀಲ ಶಬ್ದದಿಂದಲೂ ಅವರು‌ ನಿಂದಿಸಿ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಅಲ್ಲೆಲ್ಲಿ ಅವರು ಬಿತ್ತಿಪತ್ರಗಳನ್ನು ಅಂಟಿಸಿದ್ದಾರೆ.

ಈ ವಿಷಯ ಬೆಳಕಿಗೆ‌ ಬರುತ್ತಿದ್ದಂತೆ ಅಂಕೋಲಾ ಪೊಲೀಸರು ರಾಘವ ಅವರನ್ನು ಠಾಣೆಗೆ ಕರೆಯಿಸಿದರು. 'ಚಿತ್ರ ಬಿಡಿಸಿದ್ದು‌‌ ನಾನೇ.‌ ಆದರೆ, ಇದರಿಂದ ಯಾವುದೇ ಅಪರಾಧ‌ ನಡೆದಿಲ್ಲ' ಎಂದು ರಾಘವ ನಾಯಕ ಧೈರ್ಯವಾಗಿ ಸಮಜಾಯಿಶೀ ನೀಡಿದ್ದಾರೆ. 'ನಾನೊಬ್ಬ ಸರ್ಕಾರಿ ನೌಕರ. ಭಾರತ ದೇಶದ ಭಕ್ತ. ಪಾಕಿಸ್ತಾನದ ದಾಳಿ ಖಂಡಿಸಿ ಈ ಹೋರಾಟ ನಡೆಸಿದ್ದೇನೆ' ಎಂದು ರಾಘವ ನಾಯಕ ಹೇಳಿದ್ದಾರೆ.

'ದೇಶದ್ರೋಹಿ ಕೃತ್ಯ ನಡೆದಾಗ ನಾನು‌ ಕಣ್ಣು ಮುಚ್ಚಿ ಕೂರುವುದಿಲ್ಲ. ಅದನ್ನು ಖಂಡಿಸುವುದು ನನ್ನ ಹಕ್ಕು' ಎಂದು ರಾಘವ ನಾಯಕ ಅವರು ಬರೆದುಕೊಟ್ಟಿದ್ದಾರೆ. ಅವರ ಕಾರ್ಯಕ್ಕೆ ಜನಮೆಚ್ಚುಗೆ ವ್ಯಕ್ತವಾಗಿದೆ.