Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-05-01

ಶಿರಸಿ ಬಿಸಿಲಕೊಪ್ಪದಲ್ಲಿ ಮನೆ ಬೆಂಕಿಗೆ ಆಹುತಿ: ಗಿರಿಜಾ ನಾಯ್ಕ ಕುಟುಂಬಕ್ಕೆ ಸೂರಿಲ್ಲ

News Details

ಶಿರಸಿಯ ಬಿಸಿಲಕೊಪ್ಪದಲ್ಲಿ ಮನೆಯೊಂದು ಬೆಂಕಿಗೆ ಆಹುತಿಯಾಗಿದೆ. ಪರಿಣಾಮ ಮೂಡೆಬೈಲಿನ ಗಿರಿಜಾ ನಾಯ್ಕ ಅವರ ಕುಟುಂಬಕ್ಕೆ ಸೂರಿಲ್ಲವಾಗಿದೆ.

ಕಳೆದ ಮಳೆಗಾಲದ ವೇಳೆ ಗಿರಿಜಾ ನಾಯ್ಕ ಅವರ ಮನೆ ಮುರಿದು ಬಿದ್ದಿತ್ತು. ಸರ್ಕಾರದ ಸಹಾಯವೂ ಇಲ್ಲದೇ ಅವರು ಮನೆ ದುರಸ್ಥಿ ಮಾಡಿಕೊಂಡಿದ್ದರು.‌ ಮಳೆ ಬಂದಾಗ ಸೋರುತ್ತಿದ್ದರೂ ಅನಿವಾರ್ಯವಾಗಿ ಅವರು ಅಲ್ಲಿಯೇ ವಾಸವಾಗಿದ್ದರು.

ಈ ನಡುವೆ ಬುಧವಾರ ಅವರು ಬಸವ ಜಯಂತಿ ಕಾರ್ಯಕ್ರಮಕ್ಕೆ ಹೋಗಿದ್ದರು. ಆಗ ಆ ಮನೆಗೆ ಬೆಂಕಿ ಬಿದ್ದಿದ್ದು, ಮನೆಯೊಳಗಿದ್ದ ಪಾತ್ರೆ-ಬಟ್ಟೆಗಳೆಲ್ಲವೂ ಸುಟ್ಟು ಕರಕಲಾದವು. ದಿನಸಿ ಸಾಮಗ್ರಿಗಳು ಹೊತ್ತಿ ಉರಿಯಿತು.