Loading...
  • aksharakrantinagarajnaik@gmail.com
  • +91 8073197439
Total Visitors: 2788
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-05-06

ಹಳಿಯಾಳದ ಯುವ ಕಾಂಗ್ರೆಸ್ ಮುಖಂಡ ಸುಂದರರಾಜ್ ಮಾದರ ಆತ್ಮಹತ್ಯೆ

News Details

ಹಳಿಯಾಳದ ಯುವ ಕಾಂಗ್ರೆಸ್ ಮುಖಂಡ ಸುಂದರರಾಜ್ ಮಾದರ ಅವರು ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಈ ನಿರ್ಧಾರಕ್ಕೆ ನಿಖರ ಕಾರಣ ಗೊತ್ತಾಗಿಲ್ಲ.

ಹಳಿಯಾಳ ಪಟ್ಟಣದ ಇಂದಿರಾನಗರ ಹಾಗೂ ಕೊಟ್ಟಣ ಬಡಾವಣೆಯಲ್ಲಿ ಸುಂದರರಾಜ್ ಮಾದರ (29) ಅವರು ವಾಸವಾಗಿದ್ದರು. ಭಾನುವಾರ ಸಂಜೆ ಕೊಟ್ಟಣ ಬಡಾವಣೆಯಲ್ಲಿರುವ ತಮ್ಮ ಮನೆಯಲ್ಲಿ ಅವರು ನೇಣು ಹಾಕಿಕೊಂಡಿದ್ದಾರೆ.

ಸುoದರರಾಜ್ ಅವರ ಪತ್ನಿ ಸುವರ್ಣಾ ಮಾದರ್ ಪುರಸಭೆ ಸದಸ್ಯೆ. ಸುಂದರರಾಜ್ ಅವರಿಗೆ ಒಬ್ಬ ಪುತ್ರ,ಪುತ್ರಿ, ತಾಯಿ ಇದ್ದಾರೆ. ಆದರೆ, ಆತ್ಮಹತ್ಯೆ ವೇಳೆ ಅವರು ಯಾರೂ ಮನೆಯಲ್ಲಿರಲಿಲ್ಲ. ಸಂಜೆ 5 ಗಂಟೆ ಆಸುಪಾಸಿನಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.