
0:00:00
2025-05-06
ಭಟ್ಕಳದ ‘ರಾಯಲ್ ಆತಿಥ್ಯ’ ಹೋಟೆಲ್ ಅಡುಗೆ ಕೋಣೆಯಲ್ಲಿ ಬೆಂಕಿ, ಹೊಗೆ ಅಫರಾತಫರಿ
News Details
ಭಟ್ಕಳದ ಸಂಶುದ್ದೀನ್ ಸರ್ಕಲ್ ಬಳಿಯಿರುವ `ರಾಯಲ್ ಆತಿಥ್ಯ' ಹೋಟೆಲನ ಅಡುಗೆ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೊಗೆ ಹೋಗುವ ಚಿಮಣಿ ಹಾಗೂ ಎಣ್ಣೆ ಬಾಂಡಲಿಗೆ ಬೆಂಕಿ ತಗುಲಿದ್ದರಿಂದ ಅಪಾರ ಪ್ರಮಾಣದ ಹೊಗೆ ಹೊರಗಡೆ ಕಾಣಿಸಿತು.
ಸೋಮವಾರ ಮಧ್ಯಾಹ್ನ ವೇಳೆಗೆ ರಾಯಲ್ ಆತಿಥ್ಯ ವೆಜ್ ಹೊಟೇಲ್ನಲ್ಲಿ ಅಗ್ನಿ ಅವಘಡ ಉಂಟಾಯಿತು. ಹೊಟೇಲ್ ಮೇಲ್ಬಾಗದ ಚಿಮಣಿಯಲ್ಲಿ ಬೆಂಕಿಯ ಜ್ವಾಲೆ ನೋಡಿದ ಜನ ಅಲ್ಲಿನ ಸಿಬ್ಬಂದಿಗೆ ಮಾಹಿತಿ ನೀಡಿದರು. ಅದರ ಜೊತೆ ಜನರೇ ಹೊಟೇಲ್ ಒಳಗೆ ನುಗ್ಗಿ ಅಲ್ಲಿದ್ದ ಸಿಲೆಂಡರ್'ಗಳನ್ನು ಗ್ಯಾಸ್ ಒಲೆಯಿಂದ ಬೇರೆ ಮಾಡಿದರು. ಅಡುಗೆ ಕೋಣೆಯಲ್ಲಿದ್ದ ಸಿಲೆಂಡರ್'ಗಳನ್ನು ಹೊಟೇಲ್ ಸಿಬ್ಬಂದಿ ಹಿಡಿದು ಹೊರಹಾಕಿದರು.
ಅಗ್ನಿ ಅವಘಡದ ಮಾಹಿತಿ ಅರಿತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಅಗ್ನಿಯ ಜ್ವಾಲೆಯನ್ನು ನಂದಿಸಿ ಇನ್ನಷ್ಟು ಅಪಾಯವಾಗುವುದನ್ನು ತಪ್ಪಿಸಿದರು. ಪರಿಸ್ಥಿತಿ ಹತೋಟಿಗೆ ಬಂದ ನಂತರ ಜನ ನಿರಾಳರಾದರು. ಅಗ್ನಿ ದುರಂತಕ್ಕೆ ಕಾರಣ ಗೊತ್ತಾಗಿಲ್ಲ. ಈ ಬಗ್ಗೆ ವಿವಿಧ ಕಡೆ ಚರ್ಚೆ ನಡೆಯುತ್ತಿದೆ.