Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-05-08

ಕುಮಟಾದಲ್ಲಿ 25 ಅಡಿ ಬಾವಿಗೆ ಬಿದ್ದ ಜಾನುವಾರು ರಕ್ಷಣೆ

News Details

ಕುಮಟಾ ಪಟ್ಟಣದ ಚಿತ್ರಗಿಯ ಕಡೆಬಾಗದಲ್ಲಿ 25 ಅಡಿ ಆಳದ ಬಾವಿಗೆ ಬಿದ್ದ ಜಾನುವಾರನ್ನು ಅಗ್ನಿಶಾಮಕ ಸಿಬ್ಬಂದಿ ಮೇಲೆತ್ತಿದ್ದಾರೆ.

ಬಾವಿಯಲ್ಲಿ ಎತ್ತು ಬಿದ್ದಿರುವ ಬಗ್ಗೆ ಆ ಭಾಗದ ಜನ ಅಗ್ನಿಶಾಮಕ ಸಿಬ್ಬಂದಿಗೆ ಫೋನ್ ಮಾಡಿದರು. ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ತಿಮ್ಮಯ್ಯ ಎನ್ ಗೊಂಡ ಅವರು ತಮ್ಮ ಸಿಬ್ಬಂದಿ ಜೊತೆ ಅಲ್ಲಿಗೆ ಧಾವಿಸಿದರು. ರಾಘವೇಂದ್ರ ಪಟಗಾರ, ರಾಜೇಶ್ ಮಡಿವಾಳ, ವಿಷ್ಣು ಗೌಡ, ನಾಗರಾಜ್ ನಾಯ್ಕ್, ಅಜಯ್ ನಾಯ್ಕ್, ಪ್ರಮೋದ ನಾಯ್ಕ ಸಾಹಸ ಪ್ರದರ್ಶನ ಮಾಡಿದರು.

ಬಾವಿಯ ಆಳ-ಅಗಲ ಅಧ್ಯಯನ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಹಗ್ಗದ ಸಹಾಯಪಡೆದರು. ಆ ಪೈಕಿ ಪ್ರಮೋದ ನಾಯ್ಕ ಬಾವಿಗೆ ಇಳಿದು ಎತ್ತಿಗೆ ಹಗ್ಗ ಕಟ್ಟಿದರು. ಅದಾದ ನಂತರ ಎಲ್ಲಾ ಸಿಬ್ಬಂದಿ ಸೇರಿ ಹಗ್ಗ ಎಳೆದು ಎತ್ತನ್ನು ಮೇಲೆತ್ತಿದರು. ನಂತರ ಆ ಜಾನುವಾರನ್ನು ಮಾಲಕರಿಗೆ ಹಸ್ತಾಂತರಿಸಿದರು.