
ಕೈಗಾ ಕ್ರಾಸ್ನಲ್ಲಿ ಕಾರ್ಮಿಕರಿಗೆ ವಿದ್ಯುತ್ ಶಾಕ್, ಪ್ರಸನ್ನ ಎಂ ಗಾಯಗೊಂಡರು
News Details
ಕಾರವಾರದ ಮಲ್ಲಾಪುರದ ಕೈಗಾ ಕ್ರಾಸಿನಲ್ಲಿ ಮನೆ ರಿಪೇರಿ ಮಾಡುತ್ತಿದ್ದ ಕಾರ್ಮಿಕರಿಗೆ ವಿದ್ಯುತ್ ಶಾಕ್ ತಗುಲಿದೆ. ವೆಲ್ಡಿಂಗ್ ಕೆಲಸ ಮಾಡುವ ಪ್ರಸನ್ನ ಎಂ ಎಂಬಾತರು ಗಾಯಗೊಂಡಿದ್ದಾರೆ.
ಕೈಗಾ ಕ್ರಾಸಿನಲ್ಲಿ ಮನೆ ಮಾಡಿಕೊಂಡಿರುವ ಉಮಾಪತಿ ನಾಯರ್ ಅವರು ಮನೆ ಮೇಲ್ಚಾವಣಿಗೆ ಶೀಟ್ ಅಳವಡಿಸಲು ನಿರ್ಧರಿಸಿದ್ದರು. ಮನೆ ಮೇಲೆ ವಿದ್ಯುತ್ ತಂತಿ ಹಾದು ಹೋಗಿದ್ದರೂ ಅವರು ಮುನ್ನಚ್ಚರಿಕೆ ಕ್ರಮ ಅನುಸರಿಸಿರಲಿಲ್ಲ. ಪ್ರಸನ್ನ ಎಂ ಹಾಗೂ ಗೋವಿಂದ ಎಂಬಾತರಿಗೆ ಶೀಟ್ ಅಳವಡಿಸುವ ಕೆಲಸ ನೀಡಿದ್ದು, ಮೇ 6ರಂದು ಅವರಿಬ್ಬರು ಅಲ್ಲಿ ಕೆಲಸ ಮಾಡುತ್ತಿದ್ದರು.
ಈ ವೇಳೆ ಕಾರ್ಮಿಕರಿಬ್ಬರಿಗೂ ವಿದ್ಯುತ್ ಸ್ಪರ್ಶವಾಗಿದೆ. ವಿದ್ಯುತ್ ತಂತಿ ಸ್ಪರ್ಶದಿಂದ ಕದ್ರಾ ಕೆಪಿಸಿ ಲೇಬರ್ ಕಾಲೋನಿಯ ಪ್ರಸನ್ನ ಎಂ ಅವರಿಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿದೆ. ಅಪಾಯದ ಬಗ್ಗೆ ಅರಿವಿದ್ದರೂ ಕಾರ್ಮಿಕರಿಗೆ ಕೆಲಸ ನೀಡಿದ ಕಾರಣ ಪ್ರಸನ್ನ ಎಂ ಅವರ ತಂದೆ ಮುನಿರತ್ನಂ ಅಸಮಧಾನವ್ಯಕ್ತಪಡಿಸಿದ್ದಾರೆ. ಮಲ್ಲಾಪುರ ಪೊಲೀಸ್ ಠಾಣೆಗೆ ತೆರಳಿ ಅವರು ಉಮಾಪತಿ ನಾಯರ್ ವಿರುದ್ಧ ದೂರು ದಾಖಲಿಸಿದ್ದಾರೆ.