Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-05-10

ಹೊನ್ನಾವರ: ತೋಟದಲ್ಲಿ ತೆಂಗಿನಕಾಯಿ ಬಿದ್ದು ಕೃಷಿಕನ ದುರ್ಮರಣ

News Details

ಹೊನ್ನಾವರದಲ್ಲಿ ತೋಟಕ್ಕೆ ಹೋಗಿದ್ದ ಕೃಷಿಕರೊಬ್ಬರ ಮೇಲೆ ತೆಂಗಿನಕಾಯಿ ಬಿದ್ದಿದೆ. ಪರಿಣಾಮ ಅವರು ಅಲ್ಲಿಯೇ ಸಾವನಪ್ಪಿದ್ದಾರೆ.

ಹೊನ್ನಾವರದ ಹಳದಿಪುರ ಬಳಿಯ ಹಬ್ಬುಗದ್ದೆಯಲ್ಲಿ ಗೊಯ್ದು ಗೌಡ ಅವರು ವಾಸವಾಗಿದ್ದರು. ತಮಗೆ 80 ವರ್ಷವಾಗಿದ್ದರೂ ಅವರು ಉತ್ಸಾಹದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಜೊತೆಗೆ ಕೂಲಿ ಕೆಲಸವನ್ನು ಸಹ ಅವರು ನಿಭಾಯಿಸುತ್ತಿದ್ದರು.

ಮೇ 7ರ ಸಂಜೆ ಅವರು ತಮ್ಮ ಮನೆ ಪಕ್ಕದ ಸೋಮು ಗೌಡ ಅವರ ತೋಟಕ್ಕೆ ಹೋಗಿದ್ದರು. ಅಲ್ಲಿನ ತೆಂಗಿನತೋಟದಲ್ಲಿರುವ ಬಾವಿಯಿಂದ ನೀರು ತಂದು ಅವರು ಉಪಯೋಗಿಸುತ್ತಿದ್ದರು. ತೋಟದಲ್ಲಿದ್ದ ತೆಂಗಿನಮರದ ಕಾಯಿ ಗೊಯ್ದು ಗೌಡ ಅವರ ತಲೆ ಮೇಲೆ ಬಿದ್ದಿತು. ಗೌಡರ ತಲೆ ಹಿಂದೆ ಭಾರೀ ಪ್ರಮಾಣದಲ್ಲಿ ಗಾಯವಾಯಿತು.

ಇದನ್ನು ಗಮನಿಸಿದ ಅವರ ಮಗ ಗೋಪಾಲ ಗೌಡ ತಂದೆಯನ್ನು ಹೊನ್ನಾವರ ಆಸ್ಪತ್ರೆಗೆ ಸಾಗಿಸಿದರು. ಆದರೆ, ಅಷ್ಟರೊಳಗೆ ಗೊಯ್ದು ಗೌಡ ಈ ಲೋಕದ ಯಾತ್ರೆ ಮುಗಿಸಿದ್ದರು.