
0:00:00
2025-05-11
ಶೌಚಾಲಯದಲ್ಲಿ ಶವವಾಗಿ ಪತ್ತೆ – ಕರಾವಳಿ ಕಾವಲುದ ಪೊಲೀಸ್ ರಾಜೇಶ್ ಖಾರ್ವಿಗೆ ದಿಢೀರ್ ಮರಣ
News Details
ಹೊನ್ನಾವರದ ಕರಾವಳಿ ಕಾವಲು ಪಡೆಯ ಪೊಲೀಸ್ ಸಿಬ್ಬಂದಿ ರಾಜೇಶ್ ಖಾರ್ವಿ ದಿಢೀರ್ ಆಗಿ ಸಾವನಪ್ಪಿದ್ದಾರೆ. ಶೌಚಾಲಯದಲ್ಲಿ ಅವರು ಸಾವನಪ್ಪಿದ ಸ್ಥಿತಿಯಲ್ಲಿ ಸಿಕ್ಕಿದ್ದಾರೆ.
ಮಂಕಿ ಗ್ರಾಮದ ಮಡಿ ಊರಿನವರಾಗಿದ್ದ ರಾಜೇಶ ಖಾರ್ವಿ ಕಳೆದ ಏಳು ವರ್ಷಗಳಿಂದ ಕರಾವಳಿ ಕಾವಲು ಪಡೆಯಲ್ಲಿದ್ದರು. ಕೆಎನ್ಡಿ ವಿಭಾಗದಲ್ಲಿ ಅವರು ಕರ್ತವ್ಯ ನಿಭಾಯಿಸುತ್ತಿದ್ದರು. ಒಂದುವರೆ ವರ್ಷದ ಹಿಂದೆ ಅವರು ಮದುವೆಯಾಗಿದ್ದು, 3 ತಿಂಗಳ ಪುಟ್ಟ ಮಗುವನ್ನು ಹೊಂದಿದ್ದರು.
ಶುಕ್ರವಾರ ರಾತ್ರಿ ಶೌಚಾಲಯಕ್ಕೆ ತೆರಳಿದ್ದ ಅವರು ನಂತರ ಎಲ್ಲಿಯೂ ಕಾಣಿಸಿರಲಿಲ್ಲ. ಶನಿವಾರ ಬೆಳಗ್ಗೆ ಪೊಲೀಸ್ ಸಿಬ್ಬಂದಿಯೊಬ್ಬರು ಶೌಚಾಲಯಕ್ಕೆ ತೆರಳಿದಾಗ ಅಲ್ಲಿ ರಾಜೇಶ ಖಾರ್ವಿ ನೆಲದ ಮೇಲೆ ಬಿದ್ದಿರುವುದನ್ನು ಗಮನಿಸಿದರು. ಅವರನ್ನು ಎಬ್ಬಿಸಿದಾಗ ಏಳಲಿಲ್ಲ.
ಅದಾದ ನಂತರ ರಾಜೇಶ ಖಾರ್ವಿ ಸಾವನಪ್ಪಿರುವುದು ಗೊತ್ತಾಗಿದೆ. ಹೃದಯಘಾತದಿಂದ ಅವರು ಸಾವನಪ್ಪಿರುವ ಶಂಕೆಯಿದೆ. ರಾತ್ರಿ ಪಾಳಿಯ ಕರ್ತವ್ಯದ ಅವಧಿಯಲ್ಲಿ ರಾಜೇಶ ಖಾರ್ವಿ ಕೊನೆಉಸಿರೆಳೆದಿದ್ದಾರೆ.