Loading...
  • aksharakrantinagarajnaik@gmail.com
  • +91 8073197439
Total Visitors: 2788
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-05-12

ಅರಣ್ಯಾಧಿಕಾರಿಗೆ ಚಪ್ಪಲಿ ಹೊಡೆದು ಪರಾರಿಯಾದ ಮರಳುಗಾರ ಅರೆಸ್ಟ್

News Details

ಅರಣ್ಯ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ತಡೆಯಲು ಬಂದ ಅರಣ್ಯಾಧಿಕಾರಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಅದಾದ ನಂತರ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಸಿದ್ದಾಪುರ ತಾಲೂಕಿನ ಇಟಗಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿತ್ತು. ದಂಧೆಕೋರರು ಇಲ್ಲಿನ ಮರಳನ್ನು ಕದ್ದು ಕಾಳಸಂತೆಯಲ್ಲಿ ಮಾರುತ್ತಿದ್ದರು. ಈ ಬಗ್ಗೆ ಮಾಹಿತಿಪಡೆದು ಅರಣ್ಯಾಧಿಕಾರಿ ಎಚ್ ಬಿ ಗೌಡರ್ ಸ್ಥಳ ಪರಿಶೀಲನೆ ನಡೆಸಿದರು.

ಆ ವೇಳೆ ರೊಚ್ಚಿಗೆದ್ದ ಕೇಶವ ಮಡಿವಾಳ ಅರಣ್ಯಾಧಿಕಾರಿಗಳನ್ನು ನಿಂದಿಸಿದರು. ಅಕ್ರಮ ಮರಳು ತಡೆಗೆ ಬಂದವರ ವಿರುದ್ಧ ಕಿಡಿಕಾರಿದರು. ಸ್ಥಳಕ್ಕೆ ಬಂದ ಕಾರಣ ಅರಣ್ಯಾಧಿಕಾರಿಯೇ ಕ್ಷಮೆ ಕೋರಬೇಕು ಎಂದು ಕೇಶವ ಮಡಿವಾಳ ಪಟ್ಟುಹಿಡಿದರು. ಈ ವೇಳೆ ಮಾತಿಗೆ ಮಾತು ಬೆಳೆದು, ಕೇಶವ ಮಡಿವಾಳ ಅವರು ಎಚ್ ಬಿ ಗೌಡರ್ ಮೇಲೆ ಹಲ್ಲೆ ನಡೆಸಿದರು. ಜೊತೆಗೆ ಕಾಲಿನಲ್ಲಿದ್ದ ಚಪ್ಪಲಿ ಬಿಚ್ಚಿ ಅಧಿಕಾರಿಯ ಕೆನ್ನೆಗೆ ಬಾರಿಸಿದರು.

ಅಲ್ಲಿಯೇ ಇದ್ದ ವ್ಯಕ್ತಿಗಳಿಬ್ಬರು ಈ ಎಲ್ಲಾ ದೃಶ್ಯಾವಳಿಗಳನ್ನು ಚಿತ್ರಿಸುತ್ತಿದ್ದರು. ಆ ಚಿತ್ರಿಕರಣಕ್ಕೂ ಕೇಶವ ಮಡಿವಾಳ ತಡೆ ಒಡ್ಡಿದರು. ವಿಡಿಯೋ ಚಿತ್ರಿಕರಣ ಮಾಡುತ್ತಿದ್ದವರ ಮೇಲೆ ಎರಗಿ ಬಂದು, ಮೊಬೈಲ್ ಕಸಿಯುವ ಪ್ರಯತ್ನ ಮಾಡಿದರು. ಅರಣ್ಯ ಇಲಾಖೆಯವರು ಇನ್ನಷ್ಟು ಸಿಬ್ಬಂದಿ ಕರೆಯಿಸಿಕೊಳ್ಳುವುದಾಗಿ ಹೇಳಿದಾಗ ಕೇಶವ ಮಡಿವಾಳ ಕಲ್ಲು ತೂರಾಟ ನಡೆಸಿ ಪರಾರಿಯಾದರು.

ಸಿದ್ದಾಪುರ ಸಿಪಿಐ ಸೀತಾರಾಮ ಬಿಜಿ ಆರೋಪಿಯ ಬೆನ್ನಟ್ಟಿದರು. ಆಗ ಕೇಶವ ಮಡಿವಾಳ ಸಿಕ್ಕಿಬಿದ್ದರು. ಸದ್ಯ ಕೇಶವ ಮಡಿವಾಳ ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ನ್ಯಾಯಾಲಯವೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.