Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-05-15

ಅನುಪಮಾ ಹೆಗಡೆಗೆ ಚಿತ್ರಕಥೆ ಪ್ರಶಸ್ತಿ

News Details

ಶಿರಸಿ ಮೂಲದ ನ್ಯಾಯವಾದಿ, ಲೇಖಕಿ ಅನುಪಮಾ ಹೆಗಡೆ ಅವರ ಪ್ರತಿಭೆಯನ್ನು ಚಲನಚಿತ್ರ ಕ್ರಿಟಿಕ್ ಅಕಾಡೆಮಿ ಗುರುತಿಸಿದೆ. ಉತ್ತಮ ಚಿತ್ರಕಥೆಗಾಗಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

`ಹದಿನೇಳೆಂಟು' ಎಂಬ ಸಿನೇಮಾಗಾಗಿ ಅನುಪಮಾ ಹೆಗಡೆ ಚಿತ್ರಕಥೆ ರಚಿಸಿದ್ದರು. ಹೀಗಾಗಿ ಈ ಸಿನಿಮಾದ ನಿರ್ದೇಶಕ, ಕಥೆಗಾರ ಪ್ರಥ್ವಿ ಕೋಣನೂರು ಜೊತೆ ಅನುಪಮಾ ಹೆಗಡೆ ಅವರನ್ನು ಗೌರವಿಸಲಾಯಿತು, ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆದ ಸಮಾರಂಭದಲ್ಲಿ ಅನುಪಮಾ ಹೆಗಡೆ ಸನ್ಮಾನ ಸ್ವೀಕರಿಸಿದರು.

`ಹದಿನೇಳೆಂಟು' ಎಂಬ ಸಿನಿಮಾ ಒಟ್ಟು ನಾಲ್ಕು ಪ್ರಶಸ್ತಿಪಡೆದಿದೆ. ಬೆಂಗಳೂರಿನ ಪತ್ರಕರ್ತರು ಆಯ್ಕೆ ಮಾಡಿ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದು, ಚಂದನವನ ಅಕಾಡೆಮಿ ಸಾಧಕರನ್ನು ಗುರುತಿಸಿದೆ. ಅನುಪಮಾ ಹೆಗಡೆ ಅವರು ಹೈಕೋರ್ಟಿನ ನ್ಯಾಯವಾದಿಯಾಗಿದ್ದಾರೆ. ಅವರು ಶಿರಸಿಯ ನೀರ್ನಳ್ಳಿಯ ರಘುಪತಿ ಭಟ್ಟ ಹಾಗೂ ಮಹಾದೇವಿ ಭಟ್ಟ ದಂಪತಿಯ ಪುತ್ರಿ. ಹುಲೇಮಳಗಿ ಮೂಲದ ದಿನೇಶ ಹೆಗಡೆ ಅವರ ಪತ್ನಿ.