Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-05-16

ಗಾಂಜಾ ದಂಧೆ: ಶಿರಸಿ-ಯಲ್ಲಾಪುರದಲ್ಲಿ ಪೋಲಿಸ್ ಕ್ರಮ

News Details

ಯಲ್ಲಾಪುರ ಹಾಗೂ ಶಿರಸಿಯಲ್ಲಿನ ಗಾಂಜಾ ವ್ಯಸನಿಗಳ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

ಜೋಡಕೆರೆ ಬಳಿ ಮಾದಕ ವ್ಯಸನ ಸೇವಿಸುತ್ತಿದ್ದ ಆಕಾಶ ಪೋಳ ಎಂಬಾತರ ಮೇಲೆ ಯಲ್ಲಾಪುರ ಪೊಲೀಸರು ದಾಳಿ ನಡೆಸಿದ್ದಾರೆ. ಶಿರಸಿ ನಗರ ಪೊಲೀಸರು ಶಿರಸಿ ಕಸ್ತೂರಬಾ ನಗರದ ನಿಯಾಜ್ ದಾವುದ್ ಉಮರ್ ಮತ್ತು ಅರೆಕೊಪ್ಪದ ಬಾಲಚಂದ್ರ ಗುರುಮೂರ್ತಿ ಮಡಿವಾಳ ಎಂಬಾತರನ್ನು ಗಾಂಜಾ ಸೇವಿಸಿದ ಕಾರಣ ಬಂಧಿಸಿದ್ದಾರೆ.

23 ವರ್ಷದ ಆಕಾಶ ಪೋಳ ಚಾಲಕರಾಗಿದ್ದು, ಯಲ್ಲಾಪುರದ ಹೊಸಳ್ಳಿ ಊರಿನವರಾಗಿದ್ದಾರೆ. ಗಾಂಜಾ ನಶೆಯಲ್ಲಿ ತೇಲಾಡುತ್ತಿರುವಾಗಲೇ ಅವರು ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಮೇ 14ರಂದು ನಡೆದ ವೈದ್ಯಕೀಯ ತಪಾಸಣೆಯಲ್ಲಿ ಆಕಾಶ ಪೋಳ್ ಅಪಾರ ಪ್ರಮಾಣದಲ್ಲಿ ಗಾಂಜಾ ಸೇವಿಸಿರುವುದು ದೃಢವಾಗಿದೆ.

ಯಲ್ಲಾಪುರದ ಜೋಡಕೆರೆಯಿಂದ ಮಂಜುನಾಥನಗರದ ಕಡೆ ಹೋಗುತ್ತಿದ್ದ ಆಕಾಶ ಅವರನ್ನು ಪಿಎಸ್‌ಐ ಸಿದ್ದಪ್ಪ ಗುಡಿ ಅವರು ಮಾತನಾಡಿಸಿದರು. ಗಾಂಜಾ ನಶೆಯ ಅನುಮಾನದ ಹಿನ್ನಲೆ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ನೀಡಿದ ವರದಿ ಆಧಾರದಲ್ಲಿ ಪೊಲೀಸ್ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.

ಇನ್ನೂ ಶಿರಸಿ ಕಸ್ತೂರಬಾ ನಗರದ ನಿಯಾಜ್ ದಾವುದ್ ಉಮರ್ ಮತ್ತು ಅರೆಕೊಪ್ಪದ ಬಾಲಚಂದ್ರ ಗುರುಮೂರ್ತಿ ಮಡಿವಾಳ ಅವರು ಶಿರಸಿ ನಗರದ ಲಿಂಗದಕೋಣ ರಸ್ತೆ ಮೀನು ಮಾರುಕಟ್ಟೆ ಹಿಂದೆ ಗಾಂಜಾ ಸೇವಿಸುತ್ತಿರುವಾಗ ಸಿಕ್ಕಿ ಬಿದ್ದಿದ್ದಾರೆ. ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆ ಅವರನ್ನು ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢವಾಗಿದೆ. ಶಿರಸಿ ಪಿಎಸ್‌ಐ ನಾಗಪ್ಪ ಬಿ ಆ ಇಬ್ಬರ ವಿರುದ್ಧ ಕಠಿಣ ಕ್ರಮ ಜರುಗಿಸಿದರು.