Loading...
  • aksharakrantinagarajnaik@gmail.com
  • +91 8073197439
Total Visitors: 2788
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
18:43:00 2025-03-27

ಆಯಿಮನೆಯಲ್ಲಿ ಅರಳಿದ ಸಂಗೀತ ಸಂಜೆ

News Details

ಸಿದ್ದಾಪುರ. ತಾಲೂಕಿನ ಡೊಂಬೆಕೈ ಅಲ್ಲಿ ಕವಿತಾ ಮತ್ತು ಅಶೋಕ ರಾವ್ ಅವರು ಕಟ್ಟಿಸಿರುವ ನೂತನ ಗೃಹ ಆಯಿ ಮನೆ ಪ್ರವೇಶದ ನಿಮಿತ್ತ ಬುಧವಾರ ಖ್ಯಾತ ಕಲಾವಿದರ ಸಂಗೀತ ಸಂಜೆ ಏರ್ಪಡಿಸಲಾಗಿತ್ತು. ಪ್ರಾರಂಭದಲ್ಲಿ ರಾಜೇಶ್ವರಿ ವಿನಾಯಕ ಭಟ್ಟ‌ ಡೊಂಬೆಕೈ ಗಣಪತಿ ಹಾಗೂ ಶಾರದಾ ಭಜನೆಗಳನ್ನು ಹಾಡಿದರು. ಸಂಜಯ ಭಟ್ಟ ಬಿಳಗಿ ತಬಲಾದಲ್ಲಿ ,ಜೈರಾಮ ಭಟ್ಟ ಹೆಗ್ಗಾರಳ್ಳಿ ಹಾರ್ಮೋನಿಯಂ ನಲ್ಲಿ ಸಹಕರಿಸಿದರು. ಆಕಾಶವಾಣಿ ಕಲಾವಿದೆ ಅಮೃತಾ ರಾವ್ ಉಡುಪ ಬೆಂಗಳೂರು ವಿಲಂಬಿತ್ ರೂಪಕ ತಾಲ್ ಮತ್ತು ದೃತ್ ತೀನ ತಾಲ್ ದಲ್ಲಿ ರಾಗ ಜೋಗ್ ಅನ್ನು ಮತ್ತು ಮರಾಠಿ ಗೀತೆಯೊಂದನ್ನು ಸುಮಧುರವಾಗಿ ಪ್ರಸ್ತುತ ಪಡಿಸಿದರು.ಇವರಿಗೆ ಗುರುರಾಜ ಆಡುಕಳ ತಬಲಾ ಹಾಗೂ ಸತೀಶ ಭಟ್ಟ ಹೆಗ್ಗಾರ್ ಹಾರ್ಮೋನಿಯಂ ಸಾತ್ ನೀಡಿದರು. ನಂತರ ಪ್ರಕಾಶ ಹೆಗಡೆ ಕಲ್ಲಾರೆಮನೆಯವರ ಕೊಳಲು ಹಾಗೂ ಸತೀಶ ಭಟ್ಟ ಹೆಗ್ಗಾರ ಅವರ ಹಾರ್ಮೋನಿಯಂ ಜುಗಲ್ ಬಂದಿ, ಗುರುರಾಜ ಆಡುಕಳ ಅವರ ಆಕರ್ಷಣೀಯ ತಬಲಾ ಸಾತ್ ನೊಂದಿಗೆ ಪ್ರೇಕ್ಷಕರಿಗೆ ವಿಶೇಷ ರಂಜನೆ ನೀಡಿತು. ಮನೆಯ ಯಜಮಾನರಾದ ಅಶೋಕ ರಾವ್ ಸ್ವಾಗತಿಸಿದರು. ಅವಿನಾಶ್ ರಾವ್ ವಂದಿಸಿದರು.