Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
17:08:00 2025-04-03

ಕಾರವಾರದ ಬೈತಕೋಲ್ ಸಮುದ್ರ ಮಾಲಿನ್ಯಕ್ಕೆ ಕಾರಣನಾಗುತ್ತಿದ್ದ ವ್ಯಕ್ತಿಯನ್ನು ಅರಬ್ಬಿ ಸಮುದ್ರ ಬಲಿ ಪಡೆದಿದೆ. ತಾವು ಮಾಲಿನ್ಯ ಮಾಡಲು ಉದ್ದೇಶಿಸಿದ ನೀರಿನಲ್ಲಿಯೇ ಮುಳುಗಿ ಸುರೇಶ ಪಾಟೀಲ್ ಎಂಬಾತರು ಸಾವನಪ್ಪಿದ್ದಾರೆ.

News Details

ಕಾರವಾರದ ಬೈತಕೋಲ್ ಸಮುದ್ರ ಮಾಲಿನ್ಯಕ್ಕೆ ಕಾರಣನಾಗುತ್ತಿದ್ದ ವ್ಯಕ್ತಿಯನ್ನು ಅರಬ್ಬಿ ಸಮುದ್ರ ಬಲಿ ಪಡೆದಿದೆ. ತಾವು ಮಾಲಿನ್ಯ ಮಾಡಲು ಉದ್ದೇಶಿಸಿದ ನೀರಿನಲ್ಲಿಯೇ ಮುಳುಗಿ ಸುರೇಶ ಪಾಟೀಲ್ ಎಂಬಾತರು ಸಾವನಪ್ಪಿದ್ದಾರೆ.

ಕಾರವಾರ ನಗರಸಭೆಯೂ ಬಯಲು ಮಲ ವಿಸರ್ಜನೆಯನ್ನು ನಿಷೇಧಿಸಿದೆ. ಬಯಲು ಮಲ ವಿಸರ್ಜನೆ ಮಾಡದಂತೆ ಸಾಕಷ್ಟು ಜನ ಜಾಗೃತಿಯನ್ನು ನಡೆಸುತ್ತಿದೆ. ಈ ಪ್ರಕ್ರಿಯೆಯಿಂದ ವಿವಿಧ ರೋಗಗಳು ಹರಡುವ ಬಗ್ಗೆ ಅರಿವು ಮೂಡಿಸುತ್ತಿದೆ. ಅದಾಗಿಯೂ ಸುರೇಶ ಪಾಟೀಲ್ ನಿತ್ಯವೂ ಸಮುದ್ರಕ್ಕೆ ಹೋಗಿ ಮಲ ವಿಸರ್ಜನೆ ಮಾಡುತ್ತಿದ್ದರು. ಏಪ್ರಿಲ್ 1ರಂದು ಮಲ ವಿಸರ್ಜನೆಗಾಗಿ ಬೈತಕೋಲ್ ಸಮುದ್ರದ ಬಳಿ ಹೋದ ಅವರು ನೀರಿನಲ್ಲಿ ಬಿದ್ದು ಸಾವನಪ್ಪಿದರು.

87 ವರ್ಷದ ಸುರೇಶ ಪಾಟೀಲ್ ವ್ಯಾಪಾರಿಯಾಗಿದ್ದರು. ಕಳೆದ ಮೂರು ತಿಂಗಳಿನಿAದ ಹೊಟ್ಟೆನೋವಿನಿಂದ ಅವರು ಬಳಲುತ್ತಿದ್ದರು. ಪ್ರತಿ ದಿನ ಬೆಳಗ್ಗೆ ಸಮುದ್ರ ಮಾಲಿನ್ಯ ಮಾಡದೇ ಇದಿದ್ದರೆ ಅವರಿಗೆ ಸಮಾಧಾನವಾಗುತ್ತಿರಲಿಲ್ಲ. ಬೇರೆಯವರು ಅಸಹ್ಯಪಟ್ಟರೂ ಅದಕ್ಕೆ ತಲೆಕೆಡಿಸಿಕೊಳ್ಳದೇ ಅವರು ಸಮುದ್ರದ ನೀರು ಹಾಳು ಮಾಡುತ್ತಿದ್ದರು. ಸಾಕಷ್ಟು ಜನ ಬುದ್ದಿ ಹೇಳಿದರೂ ಆ ಬಗ್ಗೆ ಸುರೇಶ ಪಾಟೀಲ ತಲೆಕೆಡಿಸಿಕೊಂಡಿರಲಿಲ್ಲ.

ಏಪ್ರಿಲ್ 1ರಂದು ಅವರು ಬೈತಕೋಲ್ ಬ್ರೆಕ್‌ವಾಟರ್ ಕಡೆ ಹೊರಟರು. ಅಲ್ಲಿಂದ ಅವರು ಜೀವಂತವಾಗಿ ಮನೆಗೆ ಮರಳಲಿಲ್ಲ. ಕಾಲು ಜಾರಿ ಸಮುದ್ರಕ್ಕೆ ಬಿದ್ದು ಸಾವನಪ್ಪಿದರು.