Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
9:39:00 2025-04-04

ಅನಧಿಕೃತವಾಗಿ ನಡೆಸುತ್ತಿರುವ ಕ್ಲಿನಿಕ್ ಗಳ ಮೇಲೆ ಮುಂಡಗೋಡ ಕೆಪಿಎಂಇ ಪ್ರಾಧಿಕಾರದಿಂದ ದಾಳಿ

News Details

ಅನಿಧಿಕೃತವಾಗಿ ನಡೆಸುತ್ತಿದ್ದ 7 ಕ್ಲಿನಿಕ್ ಗೆ ಚಾವಿ ಮತ್ತು ನೊಟಿಸ್
ಮುಂಡಗೋಡ: ತಾಲೂಕಿನಲ್ಲಿ ಅನಧಿಕ್ರತವಾಗಿ ನಡೆಯುತ್ತಿದ್ದ ಕ್ಲಿನಿಕ್ ಗಳ ಮೇಲೆ ಅಧಿಕಾರಿಗಳ ದಾಳಿ ಬೀಗ ಜಡಿದು ನೋಟಿಸ್ ನೀಡಲಾಗಿದೆ.
ಶ್ರೀ ಚನ್ನಬಸವೇಶ್ವರ ಮೆಡಿಕಲ್ & ಜನರಲ್ ಸ್ಟೋರ್ಸ್ ಮಳಗಿ, ಶ್ರೀ ರೇಣುಕಾ ಮೆಡಿಕಲ್ & ಮೆಡಿಕಲ್ ಸ್ಟೋರ್ಸ್ ಮಳಗಿ, ಕೋಡಂಬಿಯಲ್ಲಿ ಅಹ್ಮದಸಾಬ್ ಎಂಬುವರು ತಮ್ಮ ಮನೆಯ ಪಕ್ಕದಲ್ಲಿ ನಡೆಸುತ್ತಿದ್ದ ಕ್ಲಿನಿಕ್, ಶ್ರೀ ಗುರು ಕ್ಲಿನಿಕ್, ಡಾ.ಅಮರ್ ಶಿಂದೆ ಇವರು ಕೊಡಂಬಿ ಮತ್ತು ಪಾಳಾ ಹಾಗು ತಮ್ಮ ಮನೆಯಲ್ಲಿ ನಡೆಸುತ್ತಿದ್ದ ಕ್ಲಿನಿಕ್, ಆರ್ ಜಿ ಪೂಜಾರ್ ನಡೆಸುತ್ತಿದ್ದ ಧನ್ವಂತರಿ ಕ್ಲಿನಿಕ್ ಕಾತೂರ್, ಗೋಪಾಲ ಬೆನ್ನೂರ್ ಗಣೇಶಪುರದ ಬಾಡಿಗೆ ಮನೆಯಲ್ಲಿ ನಡೆಸುತ್ತಿದ್ದ ಕ್ಲಿನಿಕ್ ಹಾಗು ಬಸವರಾಜ ಹಡಪದ್ ಕಾವಲಕೊಪ್ಪದಲ್ಲಿ ನಡೆಸುತ್ತಿದ್ದ ಧನ್ವಂತರಿ ಕ್ಲಿನಿಕ್ ಬಂದ್ ಮಾಡಿ ನೋಟಿಸ್ ನೀಡಲಾಗಿದೆ.
ಈ ಕಾರ್ಯಚರಣೆಯಲ್ಲಿ ಆಯ್ ಎಂ ಎ ಮುಂಡಗೋಡ ಅದ್ಯಕ್ಷರಾದ ಡಾ.ರವಿ ಹೆಗಡೆ, ತಾಲೂಕಾ ವೈದ್ಯಾದಿಕಾರಿ ಡಾ.ನರೇಂದ್ರ ಪವಾರ್, ವೈದ್ಯಾದಿಕಾರಿ ಡಾ.ಸಂಜೀವ ಗಲಿಗಲಿ, ಆಡಳಿತ ವೈದ್ಯಾದಿಕಾರಿ ಡಾ.ಭರತ್ ಡಿ.ಟಿ ಹಾಗು ಪೋಲಿಸರು ಪಾಲ್ಗೊಂಡಿದ್ದರು.