Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-08

ಗೋಕರ್ಣದಲ್ಲಿ ಮತ್ತೆ ಗುಡ್ಡ ಕುಸಿತದ ಭೀತಿ – ಇಲಾಖೆ ಇನ್ನೂ ಮೌನದಲ್ಲೇ

News Details

ಗೋಕರ್ಣ: ಕಳೆದ ಮಳೆಗಾಲದಲ್ಲಿ ಈ ಭಾಗದಲ್ಲಿ ಉಂಟಾದ ಗುಡ್ಡ ಕುಸಿತದಲ್ಲಿ ರಾಶಿ ಬಿದ್ದ ಮಣ್ಣು ಹಾಗೂ ಮತ್ತೆ ಕುಸಿಯದಂತೆ ತಡೆಯುವ ಯೋಜನೆಯನ್ನ ಇದುವರೆಗೆ ಸಂಬAಧಿಸಿದ ಇಲಾಖೆ ರೂಪಿಸದೆ ನಿರ್ಲಕ್ಷ ವಹಸಿದ್ದು,ಇನ್ನೂ ಕೆಲವೇ ತಿಂಗಳಲ್ಲಿ ಮತ್ತೆ ಮಳೆಗಾಲ ಆರಂಭಗೊಳ್ಳಲಿದ್ದು ಮತ್ತೇನಾದರೂ ದುರಂತ ನಡೆದರೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಕಳೆದ ಜುಲೈ ತಿಂಗಳಲ್ಲಿ ಭಾರಿ ಮಳೆಯ ಪರಿಣಾಮ ಇಲ್ಲಿನ ಮುಖ್ಯ ಕಡಲತೀರದ ಬಳಿ ಇರುವ ಶ್ರೀರಾಮ ಮಂದಿರದ ಪಕ್ಕದಲ್ಲಿನ ಬೃಹತ್ ಪರ್ವತ ಕುಸಿದಿತ್ತು, ಕೊದಲೆಳೆಯ ಅಂತರದಲ್ಲಿ ಮಂದಿರಕ್ಕೆ ಹಾನಿ ತಪ್ಪಿದ್ದು, ಆದರೆ ಶುದ್ದಝರಿನೀರು ಬರುವ ಸ್ಥಳ ,ಮಂದಿರದ ಛಾವಣಿ ನುಜ್ಜುಗುಜ್ಜಾಗಿತ್ತು.
ಮಣ್ಣಿನ ರಾಶಿಯನ್ನ ದೇವಾಲಯಕ್ಕೆ ಪ್ರದಕ್ಷಣೆ ಹಾಕುವ ಜಾಗ ಹಾಗೂ ಮುಚ್ಚಿದ ನೀರಿನ ಝರಿಯನ್ನ ಶಾಂಡಿಲ್ಯ ಮಹಾರಾಜರ ಶಿಷ್ಯರು ಹಾಗೂ ಸ್ಥಳೀಯರು ಅಲ್ಪ ಪ್ರಮಾಣದಲ್ಲಿ ತೆಗೆದು ಸ್ವಚ್ಚಗೊಳಿಸಿದ್ದಾರೆ.
ಪ್ರಸ್ತುತ ಬೃಹತ್ ಬಂಡೆ ಗುಡ್ಡದ ತುದಿಯಲ್ಲಿ ಬೀಳುವ ಹಂತದಲ್ಲಿದ್ದು, ಮಣ್ಣಿನ ರಾಶಿ ಹಾಗೆ ಬಿದ್ದಿದೆ.ಇದನ್ನ ತೆರವುಗೊಳಿಸುವುದು ಅಥವಾ ಇದಕ್ಕೆ ಪಿಚ್ಚಿಂಗ್ ಮತ್ತಿತರ ವೈಜ್ಞಾನಿಕ ಕ್ರಮದಿಂದ ಮತ್ತೆ ಕುಸಿಯದಂತೆ ತಡೆಯಲು ಪ್ರಯತ್ನಿಸುವುದು ಹಾಗೂ ಬಂಡೆ ಮಂದಿರದ ಮೇಲೆ ಬೀಳದಂತೆ ತಡೆಯಲು ಅಥವಾ ತೆರವುಗೊಳಿಸಲು ಸರ್ಕಾರದಿಂದ ಹಣ ಮಂಜೂರಿಗೊಳಿಸ ಬೇಕಿದೆ. ಇಲ್ಲವಾದರೆ ಮತ್ತೆ ಅವಘಡ ಸಂಭವಿಸುವ ಆತಂಕವಿದೆ.
ಇದರಂತೆ ಇಲ್ಲಿ ಮೇಲನಕೇರಿಯಿಂದ ಪ್ರವಾಸಿ ಮಂದಿರಕ್ಕೆ ತೆರಳುವ ಮಾರ್ಗದ ಪಕ್ಕದಲ್ಲಿ ಗುಡ್ಡ ಕುಸಿದು ಮಣ್ಣಿನ ರಾಶಿ ಹಾಗೇ ಬಿದ್ದಿದೆ. ಇಲ್ಲಿಯೂ ಸಹ ಮತ್ತೆ ಭೂಕುಸಿತ ಉಂಟಾದರೆ ರಸ್ತೆ ಸಂಪರ್ಕವೇ ಕಡಿತಕೊಳ್ಳಬಹುದಾಗಿದೆ. ಮೂಡಂಗಿ ಸರ್ಕಾರಿ ಶಾಲೆಯ ಬಳಿ ಸಹ ಗುಡ್ಡ ಕುಸಿದು ಬೃಹತ್ ಬಂಡೆ ಶಾಲೆಯ ಆವಾರದಲ್ಲಿ ಉರುಳಿ ಬಂದಿತ್ತು, ಇಲ್ಲಿಯೂ ಸಹ ಯಾವುದೇ ಮುಂಜಾಗೃತ ಕ್ರಮ ಇನ್ನೂ ತೆಗೆದುಕೊಂಡಿಲ್ಲ. ತಾರಮಕ್ಕಿ ಮುಖ್ಯ ರಸ್ತೆ ಬಳಿ ಸಹ ಧರೆ ಅರೆ ಬರೆ ಕುಸಿದು ನಿಂತಿದ್ದು ಈ ಭಾಗದಲ್ಲಿ ಪಿಚ್ಚಿಂಗ್ ಮಾಡುವ ಮೂಲಕ ಮತ್ತಷ್ಟು ಕುಸಿಯುವುದನ್ನ ತಡೆಯಬಹುದಾಗಿದೆ.
ವರದಿ ಹೋಗಿದೆ ಕ್ರಮವಿಲ್ಲ : ಪೃಕೃತಿ ವಿಕೋಪ , ಅವಘಡದಲ್ಲಿ ನಡೆದ ಈ ಆವಾಂತರದ ವಿವರವನ್ನ ಕಂದಾಯ ಇಲಾಖೆ ಅಧಿಕಾರಿಗಳು ಅದೇ ಸಮಯದಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಮಳೆಗಾಲ ಕಳೆದು ಆರೇಳು ತಿಂಗಳ ಕಳೆದರೂ ಯಾವುದೇ ಕ್ರಮ ಜರುಗಿಸದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅಕ್ರಮಕ್ಕೆ ಕಡಿವಾಣವೂ ಇಲ್ಲ : ಇನ್ನೂ ಪರ್ವತದ ಮೇಲ್ಬಾಗದಲ್ಲಿ ಚಿರೆಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಪರಿಣಾಮ ಬೃಹತ ಕೆರೆಗಳು ನಿರ್ಮಾಣವಾಗಿದ್ದು, ಇದರಿಂದ ಗುಡ್ಡ ಕುಸಿತ ಸಂಭವಿಸುತ್ತದೆ ಎನ್ನಲಾಗಿದೆ. ಆದರೆ ಇದುವರೆಗೂ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದರ ಜೊತೆ ಎಲ್ಲೆಂದರಲ್ಲಿ ಗುಡ್ಡ ಕಡಿದು ಸಮತಟ್ಟು ಮಾಡಲಾಗುತ್ತಿದ್ದು, ಈ ಅಸಮತೋಲನದಿಂದ ಮತ್ತಷ್ಟು ಅವಘಡದ ಆತಂಕ ಹೆಚ್ಚಿಸಿದೆ.