Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-10

ಪರೀಕ್ಷಾ ಫಲಿತಾಂಶದಿಂದ ನೊಂದ ದೀಪಿಕಾ ಆತ್ಮಹತ್ಯೆ

News Details

ಪಿಯುಸಿ ಪರೀಕ್ಷೆಯಲ್ಲಿ ಶೇ 62ರ ಸಾಧನೆ ಮಾಡಿದ್ದರೂ ತೃಪ್ತಿಯಾಗದ ದೀಪಿಕಾ ಪೂಜಾರ್ ಬಾವಿಗೆ ಹಾರಿದ್ದಾರೆ. ಪೊಲೀಸರ ಜೊತೆ ಅಗ್ನಿಶಾಮಕ ಸಿಬ್ಬಂದಿ ಸೇರಿ ದೀಪಿಕಾ ಅವರ ಶವವನ್ನು ಬಾವಿಯಿಂದ ಮೇಲೆತ್ತಿದ್ದಾರೆ.

ಬೈಂದೂರಿನ ದೀಪಿಕಾ ಮಂಜುನಾಥ ಪೂಜಾರ್ (18) ಅವರು ಯಲ್ಲಾಪುರ ತಾಲೂಕಿನ ಬಿಸಗೋಡಿನ ಬರಗದ್ದೆಯಲ್ಲಿ ವಾಸವಾಗಿದ್ದರು. ಅವರು ದ್ವಿತೀಯ ಪಿಯುಸಿ ಪರೀಕ್ಷೆಗಾಗಿ ಅವರು ಸಾಕಷ್ಟು ತಯಾರಿ ನಡೆಸಿದ್ದರು. ಪರೀಕ್ಷೆ ಎದುರಿಸಿದ ನಂತರ ಹೆಚ್ಚಿನ ಅಂಕ ಬರುವ ನಿರೀಕ್ಷೆಯಲ್ಲಿದ್ದರು. ಆದರೆ, ಫಲಿತಾಂಶ ಪ್ರಕಟವಾದಾಗ ಶೇ 62ರಷ್ಟು ಅಂಕ ದೊರೆತಿರುವುದು ಗೊತ್ತಾಯಿತು. ಇದರಿಂದ ಬೇಸರಗೊಂಡ ದೀಪಿಕಾ ತೋಟದ ಬಾವಿಗೆ ಹಾರಿ ಜೀವ ಬಿಟ್ಟರು.

ಏಪ್ರಿಲ್ 8ರ ಮಧ್ಯಾಹ್ನ 2 ಗಂಟೆಯಿ0ದ ದೀಪಿಕಾ ಕಾಣಿಸುತ್ತಿರಲಿಲ್ಲ. ರಾತ್ರಿ 10 ಗಂಟೆ ವೇಳೆಗೆ ಅವರು ಬಾವಿಗೆ ಹಾರಿರುವುದು ಗೊತ್ತಾಯಿತು. ಶವ ಮೇಲೆತ್ತಿದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅಂತ್ಯಕ್ರಿಯೆಗಾಗಿ ಬೈಂದೂರಿಗೆ ಕಳುಹಿಸಲಾಯಿತು. ಮಂಜುನಾಥ ಪೂಜಾರ್ ಅವರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.