
ಪರೀಕ್ಷಾ ಫಲಿತಾಂಶದಿಂದ ನೊಂದ ದೀಪಿಕಾ ಆತ್ಮಹತ್ಯೆ
News Details
ಪಿಯುಸಿ ಪರೀಕ್ಷೆಯಲ್ಲಿ ಶೇ 62ರ ಸಾಧನೆ ಮಾಡಿದ್ದರೂ ತೃಪ್ತಿಯಾಗದ ದೀಪಿಕಾ ಪೂಜಾರ್ ಬಾವಿಗೆ ಹಾರಿದ್ದಾರೆ. ಪೊಲೀಸರ ಜೊತೆ ಅಗ್ನಿಶಾಮಕ ಸಿಬ್ಬಂದಿ ಸೇರಿ ದೀಪಿಕಾ ಅವರ ಶವವನ್ನು ಬಾವಿಯಿಂದ ಮೇಲೆತ್ತಿದ್ದಾರೆ.
ಬೈಂದೂರಿನ ದೀಪಿಕಾ ಮಂಜುನಾಥ ಪೂಜಾರ್ (18) ಅವರು ಯಲ್ಲಾಪುರ ತಾಲೂಕಿನ ಬಿಸಗೋಡಿನ ಬರಗದ್ದೆಯಲ್ಲಿ ವಾಸವಾಗಿದ್ದರು. ಅವರು ದ್ವಿತೀಯ ಪಿಯುಸಿ ಪರೀಕ್ಷೆಗಾಗಿ ಅವರು ಸಾಕಷ್ಟು ತಯಾರಿ ನಡೆಸಿದ್ದರು. ಪರೀಕ್ಷೆ ಎದುರಿಸಿದ ನಂತರ ಹೆಚ್ಚಿನ ಅಂಕ ಬರುವ ನಿರೀಕ್ಷೆಯಲ್ಲಿದ್ದರು. ಆದರೆ, ಫಲಿತಾಂಶ ಪ್ರಕಟವಾದಾಗ ಶೇ 62ರಷ್ಟು ಅಂಕ ದೊರೆತಿರುವುದು ಗೊತ್ತಾಯಿತು. ಇದರಿಂದ ಬೇಸರಗೊಂಡ ದೀಪಿಕಾ ತೋಟದ ಬಾವಿಗೆ ಹಾರಿ ಜೀವ ಬಿಟ್ಟರು.
ಏಪ್ರಿಲ್ 8ರ ಮಧ್ಯಾಹ್ನ 2 ಗಂಟೆಯಿ0ದ ದೀಪಿಕಾ ಕಾಣಿಸುತ್ತಿರಲಿಲ್ಲ. ರಾತ್ರಿ 10 ಗಂಟೆ ವೇಳೆಗೆ ಅವರು ಬಾವಿಗೆ ಹಾರಿರುವುದು ಗೊತ್ತಾಯಿತು. ಶವ ಮೇಲೆತ್ತಿದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅಂತ್ಯಕ್ರಿಯೆಗಾಗಿ ಬೈಂದೂರಿಗೆ ಕಳುಹಿಸಲಾಯಿತು. ಮಂಜುನಾಥ ಪೂಜಾರ್ ಅವರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.